ದೊಡ್ಡಬಳ್ಳಾಪುರ ಯೋಜನಾ ಕಛೇರಿ ವ್ಯಾಪ್ತಿಯ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕಗಳ ಸಮಿತಿಯ ಸಭೆ ಯನ್ನು ದೊಡ್ಡಬಳ್ಳಾಪುರ ಯೋಜನಾ ಕಛೇರಿಯಲ್ಲಿ ನಡೆಸಲಾಯಿತು.ಸಭೆಯಲ್ಲಿ ಭಾಗವಹಿಸಿದ ಗಣ್ಯರನ್ನು ದೊಡ್ಡಬಳ್ಳಾಪುರ ಯೋಜನಾ ಕಛೇರಿಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಭಾಸ್ಕರ್ ನಾಯಕ್ ಸ್ವಾಗತಿಸಿದರು.
ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮಾನ್ಯ ಯೋಜನಾಧಿಕಾರಿಗಳಾದ ಶ್ರೀಯುತ ತಿಮ್ಮಯ್ಯನಾಯ್ಕ ರವರು ಕಾರ್ಯಕ್ರಮವನ್ನು ಕುರಿತು ಪ್ರಾಸ್ತಾವಿಕ ಮಾತನಾಡಿ ವಿಪತ್ತು ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿ ಸಾಂದರ್ಭಿಕವಾಗಿ ನಮ್ಮ ಶ್ರಮ ಹಾಗೂ ಪ್ರಯತ್ನ ಅತ್ಯವಶ್ಯಕ. ವಿಪತ್ತು ನಿರ್ವಹಣೆ ಕುರಿತು ತರಬೇತಿ ಪಡೆಯುವುದು ಸಾರ್ವಜನಿಕರ ಪ್ರಾಣ ಹಾನಿ ತಪ್ಪಿಸುವಲ್ಲಿ ಸಹಕಾರಿಯಾಗಲಿದೆ. ಇಂತಹ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಸಾರ್ವಜನಿಕರಿಗೆ ತಲುಪಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪರಿಶ್ರಮ ಎಲ್ಲರೂ ಮೆಚ್ಚುವಂತದ್ದು. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಬಂದಿರುವ ಗಣ್ಯರಿಗೆ ಅಭಿನಂದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು

ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಯೋಜನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಿರ್ದೇಶಕರಾದ ಶ್ರೀಯುತ ಉಮರಬ್ಬ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ನಮ್ಮ ಯೋಜನೆಯಲ್ಲಿ ಕೇವಲ ಕೌಶಲ್ಯಧಾರಿತ ತರಬೇತಿಗಳನಷ್ಟೇ ಅಲ್ಲದೆ ವಿಪತ್ತು ನಿರ್ವಹಣಾ ತರಬೇತಿಯನ್ನು ಸಹ ನೀಡಲಾಗುತ್ತಿದೆ. ಯೋಜನೆಯ ಪ್ರತಿಯೊಬ್ಬ ಸದಸ್ಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ವಿಪತ್ತು ನಿರ್ವಹಣಾ ತರಬೇತಿ ಅಥವಾ ಮಾಹಿತಿ ಪಡೆಯುವ ಮೂಲಕ ಅನ್ಯರಿಗೆ ನೇರವಾಗಬೇಕು ಎಂದು ತಿಳಿಸಿದರು
ಕಾರ್ಯಾಗಾರದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಕೇಂದ್ರ ಕಛೇರಿಯ ಯೋಜನಾಧಿಕಾರಿಗಳಾದ ಜೈವಂತ್ ಪಟಗಾರ್ ರವರು ಶೌರ್ಯ ಘಟಕಗಳ ಕಾರ್ಯವೈಕರಿ ಹಾಗೂ ವಿಶೇಷತೆ ಕುರಿತಂತೆ ಸಮಗ್ರವಾದ ವಿವರದೊಂದಿಗೆ ಶೌರ್ಯ ಘಟಕದ ಎಲ್ಲಾ ಸದಸ್ಯರಿಗೂ ಹಾಗೂ ಮೇಲ್ವಿಚಾರಕರುಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದರು.ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ಧಳ ಮತ್ತು ಪೋಲಿಸ್ ಇಲಾಖೆಗಳೊಂದಿಗೆ ಉತ್ತಮ ಸಹಕಾರ ನೀಡಿ ಸೇವೆ ಸಲ್ಲಿಸುವ ಕುರಿತು ತಿಳಿಸಿದರು

ಕಾರ್ಯಾಗಾರದಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗದ ಜನಜಾಗೃತಿ ವೇದಿಕೆಯ ಮೇಲ್ವಿಚಾರಕರಾದ ದರ್ಶನ್.ಎಂ.ಎಸ್,ಲೋಹಿತ್ ಗೌಡ ಕೃಷಿ ಮೇಲ್ವಿಚಾರಕರು, ದೊಡ್ಡಬಳ್ಳಾಪುರ ಯೋಜನಾ ಕಛೇರಿ ವ್ಯಾಪ್ತಿಯ ಶೌರ್ಯ ಘಟಕದ ಮೇಲ್ವಿಚಾರಕರು,ಕೃಷಿ ಮೇಲ್ವಿಚಾರಕರು,ಆಡಳಿತ ಸಹಾಯಕ ಪ್ರಭಂದಕರು, ಹಾಗೂ ಶೌರ್ಯ ತಂಡದ ಸದಸ್ಯರುಗಳು ಹಾಜರಿದ್ದರು.
