*_ರಕ್ಷಾ ರಾಮಯ್ಯಗೆ ” ಕೈ” ಟಿಕೆಟ್ : ಟಿಕೆಟ್ ” ಕೈ” ತಪ್ಪಿದ ನಿರಾಸೆಯಲ್ಲಿ ವೀರಪ್ಪ ಮೊಯ್ಲಿ ಮತ್ತು ಶಿವಶಂಕರ್ ರೆಡ್ಡಿ_*

Spread the love

ಚಿಕ್ಕಬಳ್ಳಾಪುರ ಮಾ 30 ( ವಿಜಯ ಮಿತ್ರ ): ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ರಕ್ಯಾ ರಾಮಯ್ಯ ರವರಿಗೆ ಸಿಕ್ಕಿದ್ದು , ಟಿಕೆಟ್ ವಿಚಾರವಾಗಿ ಮಾಜಿ ಸಂಸದರಾದ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವರಾದ ಶಿವಶಂಕರ್ ರೆಡ್ಡಿ ಹೆಸರು ಭಾರೀ ಸದ್ದು ಮಾಡಿತ್ತಾದರೂ , ಕೊನೆಗೆ ಕಾಂಗ್ರೆಸ್ ಯುವ ಮುಖಂಡ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ, ಕಳೆದ ಹಲವು ತಿಂಗಳುಗಳಿಂದ ಕ್ಷೇತ್ರದಾದ್ಯಂತ ಸಂಚರಿಸಿ ಮುಖಂಡರನ್ನು ಭೇಟಿ ಮಾಡುತ್ತಿರುವ ರಕ್ಷಾ ರಾಮಯ್ಯ ನಾಳೆಯಿಂದಲೇ ಅಧಿಕೃತವಾಗಿ ಪ್ರಚಾರಕ್ಕೆ ಮುಂದಾಗಲಿದ್ದಾರೆ ಎಂದು ಮೂಲಗಳು ತಿಳಿಸುವೆ.

 

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ  ಪ್ರಭಾವಿ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ರಕ್ಷಾ ರಾಮಯ್ಯ ಕಳೆದ ಎರಡು ತಿಂಗಳುಗಳಿಂದ ಕ್ಷೇತ್ರದಲ್ಲಿ  ಸಂಚರಿಸಿ , ಪಕ್ಷ ಸಂಘಟನೆಯನ್ನ ಮಾಡಲು ಮುಂದಾಗಿದ್ದರು.ಮಾಜಿ ಸಂಸದರಾದ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವರಾದ ಶಿವಶಂಕರ್ ರೆಡ್ಡಿಯವರು ಸಹ ಟಿಕೆಟ್ ಅಕಾಂಕ್ಷಿಯಾಗಿದ್ದರು, ಟಿಕೆಟ್ ಗಾಗಿ ತೀರ್ವ ಪೈಪೋಟಿ ಇದ್ದ ಕಾರಣದಿಂದ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಇಲ್ಲಿಯವರೆಗೂ ಘೋಷಣೆಯಾಗಿರಲಿಲ್ಲ, ಅಂತಿಮವಾಗಿ ಹೈಕಮಾಂಡ್ ರಕ್ಷಾ ರಾಮಯ್ಯನವರಿಗೆ ಟಿಕೆಟ್ ನೀಡಿದೆ.

 

 ರಕ್ಷಾ ರಾಮಯ್ಯನವರು ಹೊರಗಿನವರು ಎಂಬ ವಿಚಾರವನ್ನಿಟ್ಟುಕೊಂಡು ಕ್ಷೇತ್ರದ ಮುಖಂಡರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲಾಗಿತ್ತು, ಅನುಭವದ ಆಧಾರದ ಮೇಲೆ ತನಗೆ ಟಿಕೆಟ್ ನೀಡ ಬೇಕೆಂಬುದು ವೀರಪ್ಪ ಮೊಯ್ಲಿಯವರ ಒತ್ತಾಯವಾಗಿತ್ತು, ಅಂತಿಮವಾಗಿ ಯುವ ಮುಖಂಡರಿಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಘೋಷಣೆ ನಂತರ ವೀರಪ್ಪ ಮೊಯ್ಲಿ ಮತ್ತು ಶಿವಶಂಕರ್ ರೆಡ್ಡಿಯವರು ನಿರ್ಧಾರ ಏನು ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *