
*ದೊಡ್ಡಬಳ್ಳಾಪುರ ಮೇ 03 ವಿಜಯಮಿತ್ರ* : ಕಾರ್ಖಾನೆಯಿಂದ ಬರುವ ವಿಷ ಅನಿಲವು ದುರ್ವಸನೆಯಿಂದ ಕೂಡಿದ್ದು ಜನರ ಆರೋಗ್ಯದ ಮೇಲೆ ದುಷ್ಟಪರಿಣಾಮ ಬಿರುತ್ತಿದೆ. ಇಂಡೇನ ಕಾರ್ಖಾನೆ ನಮ್ಮ ಗ್ರಾಮದ ಸಂಪತ್ತನ್ನು ಹಾಳುಮಾಡುತ್ತಿದೆ ಎಂದು ಸಾಮಾಜಿಕ ಹೋರಾಟ ಕೃಷ್ಣಪ್ರಸಾದ್ ತಿಳಿಸಿದರು.
ತಾಲ್ಲೂಕಿನ ರಘುನಾಥಪುರ ಸಮೀಪದ ಇಂಡೇನ ಕಾರ್ಖಾನೆ ಮುಂಭಾಗ ಸ್ಥಳೀಯ ಯುವ ಹೋರಾಟಗಾರರು ಪ್ರತಿಭಟನೆ ನೆಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಗ್ರಾಮದ ಉಳಿವಿಗಾಗಿ ಯುವಕರು ಹೋರಾಟ ನೆಡೆಸುತ್ತಿದ್ದು. ಇಂಡೇನಾ ಕಾರ್ಖಾನೆಯಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.ದ್ರವರೂಪದ ತಾಜ್ಯವನ್ನು ಹಿಂಗು ಗುಂಡಿಗಳ ಮೂಲಕ ಭೂಗರ್ಭಕ್ಕೆ ಸೇರಿಸುತ್ತಿದ್ದು ಅಂತರ್ಜಲ ಹಾಳಾಗುತ್ತಿದೆ. ಹಾಗೂ ಸದರಿ ಕಾರ್ಖಾನೆಯು ತನ್ನ ಅಧಿಕಾರದ ಬಲದಿಂದಾಗಿ ನೂರಾರು ವರ್ಷಗಳ ಇತಿಹಾಸವಿರುವ ದೇವಾಲಗಳನ್ನು ಒತ್ತುವರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಗ್ರಾಮದ ಹಾಗೂ ಗ್ರಾಮಸ್ಥರಿಗೆ ಸೇರಿದ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಯುವಕರ ತಂಡ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಗ್ರಾಮಸ್ಥ ಜಗದೀಶ್ ಮಾತನಾಡಿ ಹಲವು ವರ್ಷಗಳಿಂದ ಈ ಸಮಸ್ಯೆಯನ್ನು ಸ್ಥಳೀಯ ಗ್ರಾಮಸ್ಥರು ಎದುರಿಸುತ್ತಿದ್ದು. ಕಾರ್ಖಾನೆ ಸಿಬ್ಬಂದಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದ ಮಕ್ಕಳು ಹೊಟ್ಟೆನೋವು, ವಾಂತಿ, ತಲೆನೋವು ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು . ಗ್ರಾಮದಲ್ಲಿ ಅಭಿವೃದ್ಧಿ ಬದಲಾಗಿ ಅನಾರೋಗ್ಯ ಹೆಚ್ಚಾಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.
ಸ್ಥಳೀಯ ಯುವಮುಖಂಡ ಕೃಷ್ಣಮೂರ್ತಿ ಮಾತನಾಡಿಕಾರ್ಖಾನೆ ಸಿಬ್ಬಂದಿ ಕೊಳವೆ ಬಾವಿಗಳ ಮೂಲಕ ವಿಷ ಪೂರಿತ ದ್ರವತಾಜ್ಯವನ್ನು ಭೂಮಿ ಸೇರುವಂತೆ ಮಾಡುತ್ತಿದ್ದು ಈ ಕಾರಣದಿಂದಾಗಿ ಸ್ಥಳೀಯವಾಗಿ ನೀರಿನ ಗುಣಮಟ್ಟ ಹಾಳಾಗಿದೆ. ಕಾರ್ಖಾನೆ ಸುಸುವ ದುರ್ವಸನೆಯಿಂದ ಗ್ರಾಮಸ್ಥರ ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ದೂರು ಸಲ್ಲಿಸಲಾಗಿದ್ದು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಆರ್. ಟಿ. ಕೃಷ್ಣಮೂರ್ತಿ,ರಮೇಶ್,ಕಿರಣ್,ರವಿಕುಮಾರ್ ಸೇರಿದಂತೆ ಹಲವು ಯುವ ಮುಖಂಡರು ಉಪಸ್ಥಿತರಿದ್ದರು.