
ದೊಡ್ಡಬಳ್ಳಾಪುರ : ಜೂನ್ 13 ರಂದು ಬೆಳಗ್ಗೆ ಗೌರಿಬಿದನೂರು ಮತ್ತು ದೇವರಪಲ್ಲಿ ರೈಲು ನಿಲ್ದಾಣಗಳ ಮಧ್ಯೆ ವಿದುರಾಶ್ವತ್ಥ ಹತ್ತಿರ ಅಪರಿಚಿತ ಗಂಡಸು ಸುಮಾರು 75 ರಿಂದ 80 ವರ್ಷದವನು ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.
ಯಶವಂತಪುರ ರೈಲ್ವೆ ಪೋಲಿಸ್ ಠಾಣೆ ಯು.ಡಿ ಆರ್.ನಂ. 110/2024 ಕಲಂ 174 Cr.P.C ರೀತ್ಯಾ ಪ್ರಕರಣ ಧಾಖಲು ಮಾಡಿಕೊಂಡಿದ್ದು ಮೃತನ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.
*ಚಹರೆ* – 5.5ಅಡಿ ಎತ್ತರ, ಕಪ್ಪು ಬಣ್ಣ ತಲೆಯಲ್ಲಿ ಸುಮಾರು 1 ಇಂಚು ಉದ್ದದ ಬಿಳಿ ಕೂದಲು,ದುಂಡು ಮುಖ ಇದ್ದು ಸಾಧಾರಣವಾದ ಮೈಕಟ್ಟು,ಹೊಂದಿರುತ್ತಾರೆ.ಬಿಳಿ ಮೀಸೆ ಹೊಂದಿರುತ್ತಾರೆ ಎಂದು ಮೂಲಗಳು ತಿಳಿಸಿವೆ.
*ಬಟ್ಟೆಗಳು* – ಬಿಳಿ ಬಣ್ಣದ ಶರ್ಟ್ , ನೀಲಿ ಬಾರ್ಡರ್ ಬಿಳಿ ಬಣ್ಣದ ಪಂಚೆ , ಬಿಳಿಯ ಬಣ್ಣದ ಒಳ ಬನಿಯನ್ ಮತ್ತು T ಆಕಾರದ ಮರದ ಊರುಗೋಲು ಕಡ್ಡಿ ಇದ್ದು ವಾರಸುದಾರರು ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ 9480802143, ಸಂಪರ್ಕಿಸಲು ಕೋರಿದೆ.