ಮಾನಸಿಕ ಹಾಗೂ ದೈಹಿಕ ಸದೃಢತೆಗಾಗಿ ಯೋಗಾಸನ ಅಗತ್ಯ – ಎ. ನಟರಾಜು

Spread the love

11ನೇ ವಿಶ್ವ ಯೋಗ ದಿನಾಚರಣೆ ಅಂಗವಾಗಿ ದೊಡ್ಡಬಳ್ಳಾಪುರ ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನಗಳನ್ನು ಮಾಡುವ ಮೂಲಕ ಯೋಗ ನಮನ ಸಲ್ಲಿಸಿದರು.

ಯಾವುದೇ ವಯಸ್ಸಿನ ಅಂತರ ವಿಲ್ಲದೆ ಮನೆಯಲ್ಲೇ ಕುಳಿತು ಸರಳರೀತಿಯಲ್ಲಿ ಮಾಡಬಹುದಾದ ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರು ನಿರಂತರ ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಮನವಿ ಮಾಡಿದರು.

ಯೋಗ ಮಾಡುವುದರಿಂದ ನಮ್ಮ ದೇಹ ಸದೃಢವಾಗುವುದಲ್ಲದೆ, ಮಾನಸಿಕವಾಗಿ ನಾವು ಸದೃಢರಾಗುತ್ತೇವೆ. ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ಹಲವು ರೋಗ ಮುಕ್ತಾರಾಗಿ ಸದಾ ಉಲ್ಲಾಸಭರಿತರಾಗಿ ಜೀವಿಸಬಹುದಾಗಿದೆ. ಯೋಗಾಸನವೆಂದರೆ ಕಠಿಣ ಆಸನಗಳನ್ನೇ ಮಾಡಬೇಕು ಎಂದೇನಿಲ್ಲ ಸರಳ ಆಸನಗಳನ್ನು ಮಾಡುವ ಮೂಲಕ ನಿತ್ಯ ಯೋಗಾಸನದೊಂದಿಗೆ ಜೀವಿಸಬಹುದು ಎಂದು ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ಎ.ನಟರಾಜ್ ತಿಳಿಸಿದರು.

ಈ ಸಂದರ್ಭದಲ್ಲಿ ನಿಸರ್ಗ ಯೋಗ ಕೇಂದ್ರದ ಕಾರ್ಯದರ್ಶಿ ಯೋಗ ನಟರಾಜ್, ಖಜಾಂಚಿ ಕೆ ಆರ್.ಶ್ಯಾಮಸುಂದರ್ ಹಾಗೂ ನಿಸರ್ಗ ಯೋಗ ಕೇಂದ್ರದ ಪದಾಧಿಕಾರಿಗಳು,ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹಾಜರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.