
ಪರಮ ಪೂಜ್ಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಫೆಬ್ರವರಿ 15 ಮತ್ತು 16ರಂದು ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಶ್ರೀ ಜಗದ್ಗುರು ಹಸರಂಗಿ ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ರಾಜ್ಯದ ಹಲವು ಮಠಾಧಿಪತಿ ಹಾಗೂ ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿಸಲಾಗಿದೆ ಎಂದು ಶ್ರೀ ಕ್ಷೇತ್ರ ಪುಣ್ಯಧಾಮದ ಪೀಠಾಧ್ಯಕ್ಷರಾದ ಗುರುದೇವ್ ಗುರೂಜಿ ತಿಳಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ಲಕ್ಕಸಂದ್ರ ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭಕ್ತರ ಉದ್ಧಾರಕ್ಕಾಗಿಯೇ ಇರುವ ಜಗದ್ಗುರು ಶ್ರೀ ಹಸರಂಗಿ ಅಜ್ಜಯ್ಯನವರ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹಗಳನ್ನು ಫೆಬ್ರವರಿ 15 ಮತ್ತು 16ನೇ ದಿನಾಂಕದಂದು ಪ್ರಾಣ ಪ್ರತಿಷ್ಠಾಪನೆಯನ್ನು ಮಾಡುವ ಮೂಲಕ ಭಕ್ತ ಲೋಕಕ್ಕೆ ಅರ್ಪಿಸಲಾಯಿತು . ಫೆಬ್ರವರಿ 15ರಂದು ವಿಶೇಷವಾಗಿ ಗೋಪೂಜೆ ,ಪ್ರಾಣ ಪ್ರತಿಷ್ಠಾಪನೆ, ಗೋ ಪ್ರವೇಶ, ಮಹಾ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಸೇರಿದಂತೆ ಹಲವು ವಿಶೇಷ ಪೂಜೆಗಳನ್ನು ನಡೆಸಿದರು ಇಂದು (ಫೆ .16) ಕಾರ್ಯಕ್ರಮಕ್ಕೆ ಹಲವು ಮಠಗಳ ಪರಮ ಪೂಜ್ಯ ಮಠಾಧ್ಯಕ್ಷರು, ಪೂಜ್ಯ ಸ್ವಾಮೀಜಿಗಳು ಆಗಮಿಸಿದ್ದು. ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪೂಜ್ಯರು ಮಾತನಾಡಿ ಈ ಸುಕ್ಷೇತ್ರವು ಮುಂದೆ ಸಾವಿರಾರು ಭಕ್ತಾದಿಗಳ ಬರುವಿಕೆಯಿಂದ ಪ್ರಕಾಶಮಾನವಾಗಿ ಬೆಳಗಲಿದೆ.ಹಲವು ಪೂಜ್ಯರ ಅಮೃತ ಹಸ್ತದಿಂದ ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆಯಾಗಿದೆ .ಹಲವು ವರ್ಷಗಳ ಶ್ರಮ ಇಂದು ಪಾಲಿಸಿದೆ ಭಕ್ತಿ ಶ್ರದ್ಧೆ ಭಾವನೆಗೆ ಈ ಕ್ಷೇತ್ರ ಹೆಸರುವಾಸಿಯಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಶ್ರೀ ಪ್ರವೀಣಸಿದ್ದ ಮಹಾಸ್ವಾಮಿಗಳು ಮಾತನಾಡಿ ಶ್ರೀ ಗುರುದೇವ್ ಗುರೂಜಿಯವರ ನೇತೃತ್ವದಲ್ಲಿ ಇಂದು ಶ್ರೀ ಕ್ಷೇತ್ರ ಪುಣ್ಯಧಾಮದಲ್ಲಿ ಹಸರಂಗಿ ಅಜ್ಜಯ್ಯ ಹಾಗೂ ಬಾಲ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯದಲ್ಲಿ ಮಹೋತ್ಸವ ನಡೆದಿದೆ. ಸಾವಿರಾರು ಭಕ್ತಾದಿಗಳಿಗೆ ನೆಮ್ಮದಿ,ಮತ್ತು ಶಕ್ತಿ ಪ್ರಧಾನವಾಗಿರುವ ಈ ಕ್ಷೇತ್ರ ಸಾಕಷ್ಟು ಅಭಿವೃದ್ದಿ ಹೊಂದಲಿ .ಗುರುಗಳ ಪ್ರೀತಿಯ ಕರೆಗೆ ಇಂದು ರಾಜ್ಯದ ಹಲವು ಭಾಗಗಳಿಂದ ಹಲವು ಮಠಗಳ ಮಹಾಸ್ವಾಮಿಗಳು ಇಲ್ಲಿಗೆ ಆಗಮಿಸಿ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದೆವೆ . ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು
ಶ್ರೀ ಕ್ಷೇತ್ರ ಪುಣ್ಯ ಧಾಮ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ಸೌಮ್ಯ ಮಾತನಾಡಿ ಕೊರೋನ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಭೇಟಿ ಕೊಟ್ಟ ನನಗೆ ಗುರುಗಳ ಶಕ್ತಿ ಅರಿವಾಯಿತು ಅಂದಿನಿಂದ ಇಂದಿನ ವರೆಗೂ ಗುರುಗಳ ಬಳಿ ಆಶೀರ್ವಾದ ಪಡೆದು ಕೊಳ್ಳುತ್ತಿದ್ದೇನೆ ಇಂದು ನಮ್ಮೆಲ್ಲರಿಗೂ ಸಂಭ್ರಮದ ಸಂಗತಿ ಗುರುಗಳ ಆಶಯ ಕಾರ್ಯರೂಪಕ್ಕೆ ಬಂದಿದ್ದು ಅಜ್ಜಯ್ಯ ಹಾಗೂ ತ್ರಿಪುರ ಸುಂದರಿ ಅಮ್ಮನವರ ವಿಗ್ರಹ ಪ್ರಾಣಾ ಪ್ರತಿಷ್ಠಾಪನಾ ಕಾರ್ಯದಲ್ಲಿ ನೆರವೇರಿದೆ .ಗುರುಗಳ ಮಾರ್ಗದರ್ಶನ ಸರ್ವರಿಗೂ ಸಿಗುವಂತಾಗಲಿ ಎಂದು ಹಾರೈಸಿದರು .
ಈ ಸಂದರ್ಭದಲ್ಲಿ ಶ್ರೀ ಹಸರಂಗಿ ಅಜ್ಜಯ ಚಾರಿಟೇಬಲ್ ಟ್ರಸ್ಟ್ ನ ಪದಾಧಿಕಾರಿಗಳು, ಹಾಗೂ ಭಕ್ತಗಣ ಉಪಸ್ಥಿರಿದರು