ಸಕ್ಕರೆ ಗೊಲ್ಲಹಳ್ಳಿ ವಿ ಎಸ್ ಎಸ್ ಏನ್ ಬಿಜೆಪಿ ತೆಕ್ಕೆಗೆ : ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ ಎದುರು ಗೆದ್ದು ಬಿಗಿದ ಬಿಜೆಪಿ

Spread the love

ದೊಡ್ಡಬಳ್ಳಾಪುರ : ಸಕ್ಕರೆ ಗೊಲ್ಲಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ (ನಿ ) ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬಿಗಿದೆ. 11 ನಿರ್ದೇಶಕರ ಸ್ಥಾನಗಳಲ್ಲಿ ಬಿಜೆಪಿಯ 10ಸದಸ್ಯರು ನಿರ್ದೇಶಕರಾಗಿ ಚುನಾಯಿತರಾಗುವ ಮುಖಾಂತರ ಸಂಘದ ಅಧಿಕಾರಕ್ಕೆರಿದೆ.

 

ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ವಿ ಎಸ್ ಎಸ್ ಏನ್ ಸಂಘದ ನಿರ್ದೇಶಕರ ಚುನಾವಣೆ ಡಿಸೆಂಬರ್ 14ರ ಶನಿವಾರದಂದು ನೆಡೆದಿದ್ದು, ಚುನಾವಣೆಯಲ್ಲಿ ಬಿಜೆಪಿಯ ಪಕ್ಷದಿಂದ ಅಪಣಪ್ಪ(

246), ರವಿಶಂಕರ್ (222), ಲಕ್ಕಮ್ಮ (214), ಪುಟ್ಟರಂಗಮ್ಮ ( 236), ಹನುಮಂತಯ್ಯ (237),ರಮೇಶ್ ( 210), ಪುಟ್ಟೇಗೌಡ ( 208), ಸೋಮಶೇಖರ್ ( 221) ರಾಮಕೃಷ್ಣಯ್ಯ ( 268),ಮುನೇಗೌಡ (197), ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ವಿರುದ್ಧ ಗೆಲುವು ಸಾಧಿಸಿದ್ದಾರೆ.

 

ಕಾಂಗ್ರೆಸ್ – ಜೆಡಿಎಸ್ ಕೇವಲ ಒಂದು ಸ್ಥಾನ ಪಡೆಯುವ ಮೂಲಕ ತೃಪ್ತಿಪಟ್ಟುಕೊಂಡಿದೆ.

Leave a Reply

Your email address will not be published. Required fields are marked *

© 2026 Malnad TV. All Rights Reserved.