ತಂಬಾಕು ತ್ಯಜಿಸಿ ಉತ್ತಮ ಜೀವನ ರೂಪಿಸಿಕೊಳ್ಳಿ – ಕೆ.ಮಹಾಲಿಂಗಯ್ಯ

Spread the love

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಇವರ ವತಿಯಿಂದ ಪಾಲನಜೋಗಹಳ್ಳಿ ಓಂಶಕ್ತಿ ದೇವಾಲಯ ಆವರಣದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಆಚರಿಸಲಾಯಿತು

ಸಂಪನ್ಮೂಲ ವ್ಯಕ್ತಿಗಳು ಹಾಗೂ ನಿವೃತ್ತ ಉಪನ್ಯಾಸಕರಾದ ಮಹಾಲಿಂಗಯ್ಯ ಇವರು ಮಾತನಾಡಿ ತಂಬಾಕು ಗುಡ್ಕ ಮದ್ಯಪಾನದಿಂದ ಯುವ ಸಮುದಾಯದಲ್ಲಿ ಹಲವರು ಸಮಸ್ಯೆಗಳು ಉಂಟಾಗುತ್ತಿದೆ ಈ ಕುರಿತು ಪರಿಣಾಮಗಳ ಬಗ್ಗೆ ಹಲವಾರು ರೀತಿ ಮಾಹಿತಿ ನೀಡಿದರು ಪ್ರತಿ 13 ರಿಂದ 15 ವರ್ಷ ವಯಸ್ಸಿನ ಹೆಣ್ಣುಮಕ್ಕಳಲ್ಲಿ ಶೇಕಡಾ 1 ಗಂಡು ಮಕ್ಕಳಲ್ಲಿ ಶೇಕಡಾವಾರು 2 ರಷ್ಟು ದುಶ್ಚಟಕ್ಕೆ ದಾಸರಗುತ್ತಿದ್ದಾರೆ ಇದರ ನಿಯಂತ್ರಣಕ್ಕಾಗಿ ಮನೆಯ ಪರಿಸರದಲ್ಲಿ ಕುಟುಂಬಸ್ಥರು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಈರೀತಿಯ ಕಾರ್ಯಕ್ರಮಗಳ ಮೂಲಕ ಜನ ಜಾಗೃತಿ ಮೂಡಿಸುತಿದ್ದು, ಸಾರ್ವಜನಿಕರು ಇಂತಹ ಕಾರ್ಯಕ್ರಮಗಳ ಮೂಲಕ ಪೇರಣೆ ಹೊಂದಬೇಕು ಎಂದು ತಿಳಿಸಿದರು

Ad

 

ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ದಿನೇಶ್,ಒಕ್ಕೂಟದ ಅಧ್ಯಕ್ಷರಾದ ಭಾರತಿ, ಮೇಲ್ವಿಚಾರಕರಾದ ಗಿರೀಶ್, ಜನಜಾಗೃತಿ ಸಧಸ್ಯರಾದ ರಮೇಶ್, ಸಂಸ್ಥೆಯ ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

© 2026 Malnad TV. All Rights Reserved.