ಕೆಆರ್‌ಎಸ್ ಪಕ್ಷದ ಮುಖಂಡ ನಿಖಿಲ್ ಹಾಗೂ ಸಹಚರರ ಮೇಲೆ FIR : ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರ ಅಗ್ರಹ

Spread the love

ದೇವನಹಳ್ಳಿ : ಜೀವನಪಾಯಕ್ಕಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದೇವೆ ಆದರೆ ಕೆಆರ್‌ಎಸ್ ಪಕ್ಷದ ಮುಖಂಡ ನಿಖಿಲ್ ಹಾಗೂ ಸಹಚರರು ರಾತ್ರೋ ರಾತ್ರಿ ಬಂದು ನಮ್ಮನ್ನು ಬೆದರಿಸಿ ನಮ್ಮ ಮೇಲೆ ಹಲ್ಲೆ ಮಾಡಿ ಮೊಬೈಲ್ ಹಾಗೂ 25ಸಾವಿರ ಹಣವನ್ನು ಕಸಿದುಕೊಂಡಿದ್ದಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಲ್ಲೆಗೊಳಗಾದ ವ್ಯಕ್ತಿ ಮಧುಸೂದನ್ ಒತ್ತಾಯಿಸಿದ್ದಾರೆ.

 

 

ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏಪ್ರಿಲ್ 06ರಂದು ರಂದು ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯನ್ನು ಕೆ ಆರ್ ಎಸ್ ಪಕ್ಷದ ಮುಖಂಡ ನಿಖಿಲ್ ಹಾಗೂ ಸಹಚರರು ತಡೆದ್ದಿದ್ದ ವಿಡಿಯೋ ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರೆದಾಡಿತ್ತು . ಆದರೆ ಈಗ ಪ್ರಕರಣ ಬೇರೆ ಆಯಾಮ ಪಡೆದಿದೆ. ಕೇವಲ ಹಣಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗಿದೆ ನಾವು ನ್ಯಾಯ ಬದ್ಧವಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಚಾಲಕರಿಗೆ ವಿಶ್ರಾಂತಿ ಪಡೆಯಲಷ್ಟೇ ಜಾಗ ನೀಡಿದ್ದು ಅದನ್ನು ನಿಖಿಲ್ ಹಾಗೂ ಸಹಚರರು ಬೇಕಂತಲೇ ಅಕ್ರಮದೊಂದೇ ಬಣ್ಣ ಕಟ್ಟಿ ಹಣ ದೋಚಲು ಸಂಚು ಮಾಡಿದ್ದರು ಎಂದು ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುವ ಮಧುಸೂದನ್ ಆರೋಪಿಸಿದ್ದಾರೆ.

 

ಈ ಕುರಿತು ಮಾತನಾಡಿರುವ ಅವರು ನಾನು ಬಿಸಿನೆಸ್ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ, ದೇವನಹಳ್ಳಿ ತಾಲೂಕಿನ ಕುಂದಾಣ ಸರ್ಕಲ್ ನಲಿರುವ ಜಯಶ್ರೀ ರವರಿಗೆ ಸೇರಿದ ಜಮೀನನು ಉಸ್ತುವಾರಿ ನೋಡಿಕೊಳ್ಳಲು ನನಗೆ ವಹಿಸಿದ್ದು, ಅದರಂತೆ ನಾನು ಜಮೀನನ್ನು ನೋಡಿಕೊಳ್ಳುತ್ತಿದ್ದೇನೆ , ಜಮೀನಿನಲ್ಲಿ ತೆಂಗಿನ ಮರಗಳಿದ್ದು, ತೋಟದ ಕೆಲಸಕ್ಕೆ 4 ಜನ ಕೂಲಿ ಆಳುಗಳನ್ನು ನೇಮಿಸಿಕೊಂಡಿದ್ದು, ಅದರಂತೆ ಕೂಲಿ ಆಳುಗಳಾದ ಪುನೀತ್, ರವಿ, ರಾಹುಲ, ಜಗನಾಥ್ ರವರು ಕೂಲಿ ಕೆಲಸ ಮಾಡಿಕೊಂಡು ಅಲ್ಲೇ ಇರುವ ಶೆಡ್ಡಿನಲ್ಲಿ ವಾಸವಿದ್ದಾರೆ ಈ ಜಮೀನಿನಲ್ಲಿ ಸ್ವಲ್ಪ ಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದು.ಬೆಂಗಳೂರಿನ ಕಡೆಗೆ ಮಾಲುಗಳನ್ನು ತುಂಬಿಕೊಂಡು ಹೋಗುವ ಲಾರಿಯ ಚಾಲಕರುಗಳು ಊಟಕ್ಕೆಂದು ನಾನು ಮಾಡಿರುವ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಲಾರಿಗಳನ್ನು ನಿಲ್ಲಿಸಿ ಊಟ ಮಾಡಿಕೊಂಡು ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಂಡು ಹೋಗುತ್ತಾರೆ , ವಾಹನಗಳನ್ನು ಪಾರ್ಕಿಂಗ್ ಮಾಡಿದ್ದಕ್ಕೆ ನನಗೆ ಸ್ವಲ್ಪ ಹಣವನ್ನು ಕೊಡುತ್ತಾರೆ .

 

ಅಂತೆಯೇ ಏಪ್ರಿಲ್ 06ರಂದು ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯ ಚಾಲಕ ಪಾರ್ಕಿಂಗ್ ಸ್ಥಳಕ್ಕೆ ಬಂದು ಲಾರಿಯನ್ನು ನಿಲ್ಲಿಸಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದು, ಅದೇ ಸಮಯಕ್ಕೆ ಕಬ್ಬಿಣದ ಸರಳುಗಳನ್ನು ತುಂಬಿದ್ದ ಮತ್ತೊಂದು ಗೂಡ್ಸ್‌ ವಾಹನ ಪಾರ್ಕಿಂಗ್ ಸ್ಥಳಕ್ಕೆ ವಿಶ್ರಾಂತಿಗೆಂದು ಬಂದಿದ್ದು. ಈ ವೇಳೆ 6-7 ಜನ ಅಪರಿಚಿತರು ಕಾರುಗಳಲ್ಲಿ ನಮ್ಮ ಪಾರ್ಕಿಂಗ್ ಸ್ಥಳಕ್ಕೆ ಬಂದು ಊಟ ಮಾಡುತ್ತಿದ್ದ ನನಗೆ ಮತ್ತು ನಮ್ಮ ಕೂಲಿ ಆಳುಗಳನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು ತೆರಿಗೆ ಉಳಿಸಲು ನೀವು ಲಾರಿಯನ್ನು ಪಾರ್ಕಿಂಗ್ ಮಾಡಿಸಿಕೊಳ್ಳುತ್ತಿದ್ದೀರಾ, ಇಲಿ. ಅಕ್ರಮ ಮಾಡುತ್ತಿದ್ದೀರಾ ಎಂದು ಬೆದರಿಸಿ ನಮ್ಮ ಬಳಿ ಇದ್ದ ಮೊಬೈಲ್ ಮತ್ತು ಹಣವನ್ನು ಕಸಿದುಕೊಂಡಿದ್ದಾರೆ.

 

 

 

ಅಕ್ರಮ ಗುಂಪು ಕಟ್ಟಿಕೊಂಡು ನಮ್ಮ ಪಾರ್ಕಿಂಗ್ ಸ್ಥಳಕ್ಕೆ ಬಂದು, ನನಗೆ ಮತ್ತು ನಮ್ಮ ಕೂಲಿ ಆಳುಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ನಮ್ಮ ಮೇಲೆ ಹಲ್ಲೆ ಮಾಡಿ, ಮೊಬೈಲ್ ಗಳನ್ನು ಮತ್ತು 25,000/- ರೂ ನಗದು ಹಣವನ್ನು ಕಸಿದುಕೊಂಡು ನಮಗೆ ಪ್ರಾಣ ಬೆದರಿಕೆ ಹಾಕಿರುವ ನಿಖಿಲ್, ನಾಗಿ ಹಾಗೂ ಅವರ ಸಹಚರರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಮನವಿ ಮಾಡುತ್ತೇನೆ ಎಂದರು

 

 

Leave a Reply

Your email address will not be published. Required fields are marked *

© 2026 Malnad TV. All Rights Reserved.