ದೊಡ್ಡಬಳ್ಳಾಪುರ ಏಪ್ರಿಲ್ 26 ( ವಿಜಯಮಿತ್ರ) : ಮರಣನಂತರ ಮೃತ ವ್ಯಕ್ತಿಯ ಕಣ್ಣುಗಳು ಮಣ್ಣಿನಲ್ಲಿ ಮಣ್ಣಾಗುವ ಬದಲು ಮತ್ತೊಬ್ಬರ ಜೀವನಕ್ಕೆ ಬೆಳಕಾಗಲಿ ನೇತ್ರಾದಾನ ಮಾಡಿ ಅಂಧರಿಗೆ ದೃಷ್ಟಿ ನೀಡಿ ಎಂದು ಟಿ. ವಿ. ರವಿ ತಿಳಿಸಿದರು
ನಗರದ ರಾಜೀವ್ ಗಾಂಧಿ ನಗರದ ನಿವಾಸಿ, ಶ್ರೀಮೋಹನ್ ಕುಮಾರ್ ( ಸುಮಾರು 45 ವರ್ಷ)ರವರು ಹೃದಯಘಾತದಿಂದ ವಿಧಿವಶರಾಗಿದ್ದು. ಮೃತರ ನೇತ್ರಗಳನ್ನು ಸಂಗ್ರಹಿಸಿ ನಂತರ ಮಾತನಾಡಿದ ಅವರು ಮೋಹನ್ ಕುಮಾರ್ ಅವರ ಕಣ್ಣುಗಳನ್ನು ಕುಟುಂಬಸ್ಥರು ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿ ಸಾವಿನಲ್ಲೂ ಮಾನವೀಯತೆಯನ್ನು ಮೆರೆದಿದ್ದಾರೆ ಎಂದರು.
ಈ ನೇತ್ರದಾನದಕ್ಕೆ ಪ್ರೇರಣೆ ನೀಡಿದ ದೊಡ್ಡಬಳ್ಳಾಪುರದ ಶಿವಕುಮಾರ್ ಜಗನ್ನಾಥ ದೇವಾಂಗರವರಿಗೂ ಹಾಗೂ ಮೃತರ ಕುಟುಂಬದ ಎಲ್ಲಾ ಸದಸ್ಯರಿಗೂ ಭಗವಂತನು ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದರು.
ಈ ನೇತ್ರದಾನದಲ್ಲಿ ಕಾರ್ಯದಲ್ಲಿ ಭಾಗವಹಿಸಿದ ಡಾ.ರಾಜ್ ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರದ ವೈದ್ಯರು ,ದೇವರಾಜ್ ಮತ್ತು ಸ್ವಾಮಿ ವಿವೇಕಾನಂದ ಶಾಲೆಯ ಆರ್.ಲಕ್ಷ್ಮೀನಾರಾಯಣ್ ರವರಿಗೂ, ಡಿ.ಸಿ.ಜಗನ್ನಾಥ್ (ಕಂಪ್ಯೂಟರ್) ಉಪಸ್ಥಿತರಿದ್ದರು.
ನೇತ್ರಸಂಗ್ರಹಣಾ ಕೇಂದ್ರದ ಮಾಹಿತಿ-
ಅಭಿಷೇಕ್ ನೇತ್ರಧಾಮ, ಲಯನ್ಸ್ ಕ್ಲಬ್, ಎಂ.ಎ.ಬಿ.ಎಲ್. ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆ, ದೊಡ್ಡಬಳ್ಳಾಪುರ.
ದೂರವಾಣಿ ಸಂಖ್ಯೆ :
9742202650, 9036797177, 9902884008, 9844179963
8970821216
