ದೊಡ್ಡಬಳ್ಳಾಪುರ ( ವಿಜಯಮಿತ್ರ) : ತಾಲೂಕಿನ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯನವರು ನನ್ನ ವಿರುದ್ಧ ಹಲವು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ತಾಲ್ಲೂಕಿನ ಮತದಾರರಲ್ಲಿ ಹಾಗೂ ತಾಲ್ಲೂಕಿನ ಹಾಲು ಉತ್ಪಾದಕರಲ್ಲಿ ಗೊಂದಲ ಸೃಷ್ಟಿ ಮಾಡಲು ಹೊರಟಿದ್ದಾರೆ . ಅವರ ಆರೋಪಗಳು ಸತ್ಯಕ್ಕೆ ದೂರವಾದುದ್ದು, ಅವರ ಹೇಳಿಕೆ ಸತ್ಯವೇ ಆಗಿದ್ದರೆ ಅವರು ಯಾರಿಗೂ ಮೋಸ ಮಾಡಿಲ್ಲ ಎಂಬುದೇ ಆದರೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಲಿ ಎಂದು ಬಮೂಲ್ ನಿರ್ದೇಶಕ ಬಿ ಸಿ ಆನಂದ್ ಕುಮಾರ್ ತಿಳಿಸಿದರು.

ನಗರದ ಬಮೂಲ್ ಶಿಬಿರ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು ನೆನ್ನೆ ತಾಲೂಕಿನ ಮಾಜಿ ಶಾಸಕ ಟಿ ವೆಂಕಟರಮಣಯ್ಯನವರು ನನ್ನ ಮೇಲೆ ಅನೇಕ ಆರೋಪಗಳನ್ನು ಮಾಡಿದ್ದು, ಅವರ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ , ಬಮೂಲ್ ನಿರ್ದೇಶಕ ಸ್ಥಾನವನ್ನು ನನ್ನ ತಮ್ಮ ಭಿಕ್ಷೆ ನೀಡಿದ್ದಾನೆ ಎನ್ನುವ ಮಾಜಿ ಶಾಸಕರು 2013ರಲ್ಲಿ ತಾಲ್ಲೂಕಿಗೆ ಬಂದವರು ಆದರೆ ನಾನು 1995 ರಲ್ಲಿ ಕಾಂಗ್ರೆಸ್ ಕಾರ್ಯಕರ್ತನಾಗಿದ್ದೆ , ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ಬೂತ್ ಮಟ್ಟದಿಂದ ದುಡಿದಿದ್ದೇನೆ, ಅಲ್ಲದೆ ಅಂದಿನಿಂದ ಸ್ಥಳೀಯ ಮುಖಂಡರಾದ ತಿ.ರಂಗರಾಜುರವರ ನೇತೃತ್ವದಲ್ಲಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಹಲವಾರು ಚುನಾವಣೆಗಳನ್ನು ಎದುರಿಸಿದ್ದೇನೆ. ಪ್ರತಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯ ಪರ ಬೆಂಬಲವಾಗಿ ನಿಂತು ಯಾವುದೇ ಅಮಿಷಗಳಿಗೆ ಒಳಗಾಗದೆ ಸಂಪೂರ್ಣ ಶುದ್ಧ ಹಸ್ತದಿಂದ ದುಡಿದ್ದಿದ್ದೇನೆ, ಅದನ್ನು ಮಾಜಿ ಶಾಸಕರು ಅರಿತುಕೊಳ್ಳಲಿ ಎಂದರು.
ಮಾಜಿ ಶಾಸಕರು ದೊಡ್ಡಬಳ್ಳಾಪುರ ತಾಲೂಕಿಗೆ ಬರುವ ಮುಂಚೆಯೇ ನಾನು ಡಿ.ಕೆ ಶಿವಕುಮಾರ್ ನೇತೃತ್ವದ ರಾಜೀವ್ ಗಾಂಧಿ ಯುವ ಶಕ್ತಿ ಕೇಂದ್ರದ ಪ್ರತಿನಿಧಿಯಾಗಿದ್ದೆ ಎಂಬುದು ಮಾಜಿ ಶಾಸಕರಿಗೆ ಗೊತ್ತಿಲ್ಲ ಅಲ್ಲದೇ ಅವರು ಬರುವ ಮೊದಲೇ ನಾನು ಗ್ರಾಮಪಂಚಾಯತಿ ಸದಸ್ಯನಾಗಿ, ಪಂಚಾಯತಿ ಉಪಾಧ್ಯಕ್ಷನಾಗಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಕೂಡ ಮಾಡಿದ್ದೆ. ಕಾಂಗ್ರೆಸ್ ಪಕ್ಷವು ನನಗೆ ಕೊಟ್ಟಿರುವುದಕ್ಕಿಂತ ಡಬಲ್ ನಾನು ಸೇವೆ ರೂಪದಲ್ಲಿ ಪಕ್ಷಕ್ಕೆ ವಾಪಾಸ್ ನೀಡಿದ್ದೇನೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಆರ್ ಜಿ ವೆಂಕಟಚಾಲಯ್ಯ ನವರು ಸ್ಪರ್ಧಿಸಿದ್ದ ಸಂದರ್ಭದಲ್ಲಿ ನನ್ನ ಗ್ರಾಮದ ಬೂತ್ ನಲ್ಲಿ ಅತಿಹೆಚ್ಚು ಲೀಡ್ ಕೊಡುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ನನ್ನ ನಿಷ್ಠೆ ತೋರ್ಪಡಿಸಿದ್ದೇನೆ ತಾಲೂಕಿನ ಪ್ರತಿ ಮನೆಮನೆಗೂ ಭೇಟಿ ನೀಡಿ ಪಕ್ಷವನ್ನು ಕಟ್ಟಿದ್ದೇನೆ.ನಾನು ಈವರೆಗೂ ಯಾವುದೇ ಫ್ರೀ ಪೋಸ್ಟ್ ತಗೊಂಡಿಲ್ಲ ನಂಗೆ ಯಾರು ಭಿಕ್ಷೆ ಕೊಟ್ಟಿಲ್ಲ ಎಂದರು.
ನೀವು ಭಿಕ್ಷೆಕೊಡುವಷ್ಟು ಯೋಗ್ಯರಲ್ಲ
ಹಲವಾರು ಭಿಕ್ಷೆಗಳನ್ನು ಪಡೆದು ಬಿ.ಸಿ.ಆನಂದ್ ಕುಮಾರ್ ಬಮುೂಲ್ ಸ್ಥಾನ ಪಡೆದಿದ್ದಾರೆ ಎಂಬ ಮಾಜಿ ಶಾಸಕರ ಹೇಳಿಕೆಗೆ ಉತ್ತರ ನೀಡಿದ ಅವರು ನಾನು ಈವರೆಗೂ ಯಾರ ಬಳಿಯೂ ಯಾವುದೇ ಸ್ಥಾನಮಾನವನ್ನು ಕೇಳಿಲ್ಲ , ಅಂದಿನ ಬಮೂಲ್ ಚುನಾವಣೆಯ ಸಂದರ್ಭದಲ್ಲಿ ನಾವು ಎಷ್ಟೇ ಕಷ್ಟಪಟ್ಟರು ನಮ್ಮ ಕಾಂಗ್ರೆಸ್ ಓಟು 32ರಿಂದ 40ಕ್ಕೆ ನಿಂತು ಹೋಯಿತು, ಹಲವು ಅಭ್ಯರ್ಥಿಗಳನ್ನು ನಿರ್ಧರಿಸಿ 8 -10ಮೀಟಿಂಗ್ ಮಾಡಿ ದಿ.ಅಪ್ಪಯ್ಯಣ್ಣ ನವರ ವಿರುದ್ಧ ನಿಲ್ಲಿಸಲು ಪ್ರಯತ್ನ ನೆಡೆಸಿದ್ದರು ಆದರೆ ಅಂದು ಅವರ ವಿರುದ್ಧ ನಿಲ್ಲಲು ಯಾವ ಅಭ್ಯರ್ಥಿಯೂ ಒಪ್ಪದ ಕಾರಣ ನನ್ನನ್ನು ನಿಲ್ಲಿಸಿದ್ರು. ಇಂತಹ ಪರಿಸ್ಥಿತಿಯಲ್ಲಿ ಮುಖಂಡರ ಒತ್ತಾಯದ ಮೇರೆಗೆ ಬಮೂಲ್ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಇಂದು ಮಾಜಿ ಶಾಸಕರು ಹೇಳುತ್ತಾರೆ ನನ್ನ ತಮ್ಮ ಕೊಟ್ಟ ಭಿಕ್ಷೆಯಿಂದ ಆನಂದ್ ಬಮೂಲ್ ನಲ್ಲಿ ಇದ್ದಾರೆ ಎಂದು. ತಮ್ಮ ತಮ್ಮನನ್ನು ಕಣಕ್ಕಿಳಿಸದ ಮಾಜಿ ಶಾಸಕರು ಇಂದು ಆಕ್ರೋಶದಲ್ಲಿ ಮಾತನಾಡುವುದು ನೋಡಿದರೆ ವಿಪರ್ಯಾಸ ಎನಿಸುತ್ತದೆ. ಹತ್ತು ವರ್ಷಗಳ ಸುಧೀರ್ಘ ಆಡಳಿತ ಮಾಡಿರುವ ಮಾಜಿ ಶಾಸಕರು ಬಮೂಲ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಹಾಕಲು ಸಾಧ್ಯವಾಗಲಿಲ್ಲ ಇಂದು ನಮ್ಮ ವಿರುದ್ಧವಾಗಿ ವಾಗ್ದಾಳಿ ಮಾಡುತ್ತಾರೆ ಇದು ಎಷ್ಟು ಸರಿ ನಾನು ಭಿಕ್ಷೆ ಬೇಡುವಷ್ಟು ಕೀಳು ಮಟ್ಟಕ್ಕೆ ಇಳಿದಿಲ್ಲ ನನಗೆ ಭಿಕ್ಷೆ ಕೊಡುವಷ್ಟು ಯೋಗ್ಯರು ಅವರಲ್ಲ ಅದನ್ನು ಅವರು ಅರಿತುಕೊಳ್ಳಲಿ. ನನ್ನ ಜೀವನದಲ್ಲಿ ನಾನು ಯಾರಿಗಾದರೂ ಋಣಿಯಾಗಿದ್ದೇನೆ ಎಂದರೆ ಅದು ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೆ ಮಾತ್ರ ಕಾರಣ ಕೆಎಂಎಫ್ ವಿಚಾರದಲ್ಲಿ ಅವರ ಸಹಕಾರ ಎಂದಿಗೂ ನಾನು ಮರೆಯುವುದಿಲ್ಲ ಎಂದರು.
2014-15 ನೇ ಸಾಲಿನಲ್ಲಿ ವಿ ಎಸ್ ಎಸ್ ಎನ್ ಅಧ್ಯಕ್ಷ ಸ್ಥಾನ ಕೊಟ್ಟಿದ್ದು ಮುಖಂಡರಾದ ತಿ. ರಂಗರಾಜು ರವರು ಅದು ನೆನಪಿರಲಿ.ಅಲ್ಲದೇ ಜಿಲ್ಲಾ ಪಂಚಾಯಿತಿ ಚುನಾವಣೆ ಟಿಕೆಟ್ ಬಗ್ಗೆ ಮಾತನಾಡುವ ಮಾಜಿ ಶಾಸಕರು Dr. ವಿಜಿಕುಮಾರ್ ಹಾಗೂ ಸಿ ನಾರಾಯಣ ಸ್ವಾಮಿ ಅವರನ್ನ ಎದುರಿಸೋ ಶಕ್ತಿ ಇಲ್ಲದೆ ಅಂದು ಕೆ ಟಿ ಕೃಷ್ಣಪ್ಪ, ಚುಂಚೇಗೌಡರು ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದ್ದರು, ತಾಲೂಕಿನ ಎಲ್ಲಾ ಮುಖಂಡರ ಒತ್ತಾಯದ ಮೇರೆಗೆ ಒಪ್ಪಿಕೊಂಡೆ ಆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ ಕೆ ಶಿವಕುಮಾರ್ ಸಾಹೇಬ್ರಿಗೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಅಂತ ಹೇಳಿದ್ದೆ. ಅವರ ಮೇಲಿನ ಪ್ರೀತಿಗಾಗಿ ಜಿಲ್ಲಾ ಪಂಚಾಯತಿ ಟಿಕೆಟ್ ಪಡೆದೆ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದೆ ಆ ಟಿಕೆಟ್ ಕೊಟ್ಟಿದ್ದು ಭಿಕ್ಷೆಯಿಂದ ಅಲ್ಲ ಎಂದು ತಿಳಿಸಲು ಇಚ್ಛಿಸುತ್ತೇನೆ ಎಂದರು.
ನಾನು ಡಿ ಕೆ ಅಭಿಮಾನಿ
ನಾನು 1995 ರಿಂದಲೂ ನನ್ನ ರಾಜಕೀಯ ಆರಾಧ್ಯ ದೈವವಾಗಿ ರಾಜ್ಯದ ಉಪ ಮುಖ್ಯಮಂತ್ರಿಗಳ ಡಿ.ಕೆ ಶಿವಕುಮಾರ್ ಅವರನ್ನು ಆರಾಧಿಸುತ್ತಾ ಬಂದಿದ್ದೇನೆ, ಬಮೂಲ್ ಚುನಾವಣೆ ಸಂದರ್ಭದಲ್ಲಿ ತಾಲೂಕಿನ ಹಾಲಿ ಶಾಸಕರು, ಹಾಗೂ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಏರ್ಪಡಿಸಿದ್ದ ಸಭೆಯಲ್ಲಿ ಮೊದಲೇ ಹೇಳಿ ಡಿ ಕೆ ಶಿವಕುಮಾರ್ ರವರಿಗೆ ಹಾರಕೊಡಲು ಹೋಗಿದ್ದೆ , ನಾನು ಕದ್ದು ಮುಚ್ಚಿ ರಾತ್ರೋರಾತ್ರಿ ಹೋಗಿ ಹಾರ ಕೊಟ್ಟು ಬಂದಿಲ್ಲ, ಅದನ್ನು ಪ್ರಶ್ನೆ ಮಾಡುವ ಕೆಲ ಕಾಂಗ್ರೆಸ್ಸಿಗರಿಗೆ ಈ ಮೂಲಕ ಉತ್ತರಸುತ್ತಿದ್ದೇನೆ .ನಾನು ಡಿ ಕೆ ಶಿವಕುಮಾರ್ ಅಭಿಮಾನಿ ಅಭಿಮಾನಕ್ಕೆ ಪಕ್ಷ ಎಂಬುದಿಲ್ಲ ವ್ಯಕ್ತಿ ಅಷ್ಟೇ ಮುಖ್ಯ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಅಲ್ಲದೇ ರಾಜಕೀಯವಾಗಿ ಅವರನ್ನು ಗುರುಗಳನ್ನಾಗಿ ಸ್ವೀಕರಿಸುವ ಮೂಲಕ ಅವರ ಬೆಂಬಲಿಗನಾಗಿದ್ದೇನೆ ನೆಚ್ಚಿನ ನಾಯಕನಿಗೆ ಹಾರ ಕೊಡುವುದರಲ್ಲಿ ತಪ್ಪೇನಿದೆ ನನ್ನ ತಾಲ್ಲೂಕಿನ ಹಾಲು ಉತ್ಪಾದಕರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ರಾಜ್ಯದ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರಿಗೆ ಗೌರವ ಸೂಚಕವಾಗಿ ಹಾರ ನೀಡಿದ್ದೇನೆ ಎಂದರು.
ನಾನು ಬೇರೆಯವರಂತೆ ಭ್ರಷ್ಟಾಚಾರ ಮಾಡದೆ ನನಗೆ ಕೊಟ್ಟಿರುವ ಅವಕಾಶ ಹಾಗೂ ಅಧಿಕಾರಗಳಲ್ಲಿ ಯಾರ ಬಳಿಯೂ ಲಂಚ ಅಪೇಕ್ಷೆ ಪಡದೆ ಪಕ್ಷಭೇದ ಮಾಡದೆ ಸೇವೆ ಸಲ್ಲಿಸಿದ್ದೇನೆ, ಹಾಗೇನಾದರೂ ನಾನು ತಪ್ಪು ಮಾಡಿದ್ದೇನೆ ಎಂದಾದರೆ ಸಾಕ್ಷಿ ಸಮೇತ ನಿರೂಪಿಸಿ ನೀವು ಹೇಳೋ ಮಾತು ಕೇಳ್ತೀನಿ ಎಂದರು.
ನನ್ನ ಗೆಲುವು ನನ್ನ ಸ್ನೇಹಿತರು ಹಾಗೂ ಕಾರ್ಯಕರ್ತರದ್ದು
ಹಲವು ಕುತಂತ್ರಗಳ ನಡುವೆ ನಡೆದ ಬಮೂಲ್ ಚುನಾವಣೆಯಲ್ಲಿ ನಾನು ಪಡೆದೆದ್ದು 150ಕ್ಕೂ ಹೆಚ್ಚು ಮತಗಳು ನಮ್ಮ ಬಿಜೆಪಿ ಅಷ್ಟೇ ಅಲ್ಲದೆ ಪ್ರಾಮಾಣಿಕ ಜೆಡಿಎಸ್ ಹಾಗೂ ಪ್ರಾಮಾಣಿಕ ಕಾಂಗ್ರೆಸ್ ಹಾಲು ಉತ್ಪಾದಕ ಸಂಘಗಳ ಅಧ್ಯಕ್ಷರು ಮತದಾನ ಮಾಡುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಹಕರಿಸಿದ್ದಾರೆ. ಈ ಗೆಲುವು ನನ್ನದಲ್ಲ ನನಗಾಗಿ ಹಗಲಿರುಳು ದುಡಿದ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು, ನನ್ನ ಸ್ನೇಹಿತರು ಹಾಗೂ ಕಾರ್ಯಕರ್ತರದ್ದು ಎಂದರು.

ಮಾಜಿ ಶಾಸಕರೇ ನಿಮ್ಮ ಅಧಿಕಾರದ ಅವಧಿಯಲ್ಲಿ ನಿಮ್ಮಿಂದ ಒಬ್ಬೇ ಒಬ್ಬ ಕಾರ್ಯಕರ್ತ ಜೀವನ ಕಟ್ಟಿಕೊಂಡಿದ್ದೇನೆ ಎಂದಿದ್ದರೆ ತೋರಿಸಿ ನೋಡಣ, ನಿಮ್ಮ ಬಗ್ಗೆ ಒಬ್ಬ ಅಧಿಕಾರಿ ಒಳ್ಳೆ ಅಭಿಪ್ರಾಯ ವ್ಯಕ್ತ ಪಡಿಸಲ್ಲ ನಾನು ಡೈರಿ ಚುನಾವಣೆಯಲ್ಲಿ ಗೆಲುವು ಸಾದಿಸಿದ ಮೇಲೆ ಬುಕ್ ಅಲ್ಲಿ ಕ್ಲೂ ಕೊಟ್ರಿ ಓದು ಡೈರಿಗೆ 3ಸಾವಿರ ವಸೂಲಿ ಮಾಡು ಅಂತ ಅದನ್ನ ನಾನು ಮಾಡಿಲ್ಲ ಅವರ ವಿರುದ್ಧ ಅ**ಸ್ ಪದ ಬಳಕೆ ಮಾಡಲು ಅವರೇ ಕಾರಣ ಚುನಾವಣೆ ಮೂರು ದಿನಗಳಿದ್ದ ಸಂದರ್ಭದಲ್ಲಿ ನನ್ನ ವಿರುದ್ಧ ಪೊಲೀಸ್ ಮೊಕದ್ದಮೆ ಹೂಡಲು ಕುತಂತ್ರ ನೆಡೆಸಿದ್ದರು ಆ ಕೋಪಕ್ಕೆ ಮಾತು ತಪ್ಪಿ ಹಾಗೆ ಹೇಳಿದ್ದೇನೆ ಅದು ಉದ್ರೇಕದ ಮಾತು ಉದ್ದೇಶಪೂರಕವಾಗಿ ಹೇಳಿದ ಮಾತಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರು, ಎ ಪಿ ಎಂ ಸಿ ಮಾಜಿ ಅಧ್ಯಕ್ಷರು ಆದ ತಿ ರಂಗರಾಜು, ಬಿಜೆಪಿ ತಾಲ್ಲೂಕು ಮಂಡಾಲಧ್ಯಕ್ಷ ನಾಗೇಶ್, ನಾಗರೀಕ ಹಿತ ರಕ್ಷಣಾ ಸಮಿತಿ ಬಿ ರವೀಂದ್ರ ಕುಮಾರ್, ಕಸುವನಹಳ್ಳಿ ಅಬರೀಷ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
