ಯಲಹಂಕದ ಮಣಿಪಾಲ್ ಆಸ್ಪತ್ರೆ ವೈದ್ಯರ ಆರೈಕೆ : ಮಹಡಿಯಿಂದ ಬಿದ್ದ 2 ವರ್ಷದ ಮಗುವಿಗೆ ಜೀವದಾನ

ದೊಡ್ಡಬಳ್ಳಾಪುರ : ಮಹಡಿ ಮೇಲಿಂದ ಬಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಗುವಿಗೆ ಶೀಘ್ರ ಹಾಗೂ ಉತ್ತಮ ಚಿಕಿತ್ಸೆ ನೀಡುವ ಮೂಲಕ ಯಲಹಂಕದ ಮಣಿಪಾಲ್ ಆಸ್ಪತ್ರೆಯ ವೈದ್ಯರ ತಂಡ ಜೀವದಾನ ಮಾಡಿದೆ. ಈ ಘಟನೆ ಕುರಿತು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಆಸ್ಪತ್ರೆಯ ವೈದ್ಯರ ತಂಡ 2 ವರ್ಷ 8 ತಿಂಗಳ ಮಗು ನಿಮ್ಮಾ ಫಾತಿಮಾ ಅವರ ಅದ್ಭುತ ಬದುಕುಳಿವಿನ ಕಥೆಯನ್ನು ಹಂಚಿಕೊಂಡರು. Ad ಈ ಕುರಿತು ಮಕ್ಕಳ ತೀವು ನಿಗಾ ತಜ್ಞರಾದ ಡಾ.ಸಯ್ಯದ್ ಎಂ.ಡಿ.ನೌಷಾದ್ ಅಲಿ […]

Continue Reading

ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹ : ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ದ ಎಂದ ಬಿಜೆಪಿ ಪ್ರಮುಖರು 

ದೊಡ್ಡಬಳ್ಳಾಪುರ :2025-26ನೇ ಸಾಲಿನಲ್ಲಿ ಮುಂಗಾರು ಅತೀವೃಷ್ಟಿ ಮಳೆಯಿಂದಾಗಿ ನಷಕ್ಕೊಳಗಾದ ರೈತರು ಬೆಳೆದ ಏಕದಳ, ದ್ವಿದಳ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಸ್‌ಡಿಆರ್ ಆಫ್/ಎನ್ ಡಿಆರ್‌ಎಫ್ ನಿಯಮಕ್ಕೆ ಅನುಸಾರವಾಗಿ ಹಾಗೂ ರಾಜ್ಯ ಸರ್ಕಾರದಿಂದ ಪರಿಹಾರ ಧನ ಬಿಡುಗಡೆಗೊಳಿಸಬೇಕು ಇಲ್ಲದೆಹೋದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬಿಜೆಪಿ ರೈತ ಮೋರ್ಚಾ ವತಿಯಿಂದ ಉಗ್ರಹೋರಾಟ ಕೈಗೊಳ್ಳಲಾಗುವುದು ಎಂದು ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವನಾಥ್ ತಿಳಿಸಿದರು.   ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ರೈತರು ಬೆಳೆದ […]

Continue Reading

ಯಲಹಂಕ : 1982ನೇ ಮದ್ಯವರ್ಜನ ಶಿಬಿರ ಉದ್ಘಾಟನಾ ಸಮಾರಂಭ

ಯಲಹಂಕ : ಮದ್ಯವರ್ಜನ ಶಿಬಿರ ಇದೊಂದು ಪವಿತ್ರ ಕಾರ್ಯಕ್ರಮ. ಇದು ಕೇವಲ ಧರ್ಮಸ್ಥಳದ ಕಾರ್ಯಕ್ರಮವಲ್ಲ. ಬದಲಾಗಿ ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ. ಆದ್ದರಿಂದ ಸಾರ್ವಜನಿಕರ ತನು – ಮನ – ಧನ ಸಹಕಾರದೊಂದಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಜಿಲ್ಲಾ ನಿರ್ದೇಶಕ ಉಮರಬ್ಬ ತಿಳಿಸಿದರು.   ರಾಜನಕುಂಟೆ ಅದ್ದಿಗಾನಹಳ್ಳಿಯ ಶ್ರೀ ಪಟಾಲಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ನಡೆದ 1982ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಧರ್ಮಸ್ಥಳ […]

Continue Reading

ಕಿಡ್ನಿ ಕಸಿ ಮಾಡಿಸಿಕೊಳ್ಳಲು ಹಣವಿಲ್ಲದೆ ಪರದಾಡುತ್ತಿರುವ ಕುಟುಂಬ : ಆರ್ಥಿಕ ಸಹಾಯ ನೀಡಲು ದಾನಿಗಳಲ್ಲಿ ಮನವಿ

ಯಲಹಂಕ : ತಾಲೂಕಿನ ಹನಿಯೂರು ಗ್ರಾಮದ 34ರ ಪ್ರಾಯದ ಲೋಕೇಶ್ ಎರಡು ಕಿಡ್ನಿ ವೈಫಲ್ಯದಿಂದ ಕಳೆದ ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ, ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸುತ್ತಿದ್ದು,   ಪ್ರತಿ ಬಾರಿ ಡಯಾಲಿಸ್ ಮಾಡಲು ಎರಡರಿಂದ ಮೂರು ಸಾವಿರ ಹಣ ಬೇಕು, ಸಾಲ ಮಾಡಿ ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್ ಮಾಡಿಸಿ ಜೀವ ಉಳಿಸಿಕೊಂಡಿದ್ದಾರೆ. ಕಿಡ್ನಿ ಕಸಿ ಮಾಡಿಸಿಕೊಳ್ಳಲು ಆರ್ಥಿಕ ಸಹಾಯಬೇಕಾಗಿದ್ದು ಕುಟುಂಬಸ್ಥರು ದಾನಿಗಳ ನಿರೀಕ್ಷೆಯಲ್ಲಿದ್ದಾರೆ.   ಹೌದು ಸದೃಢ ಹಾಗೂ ಆರೋಗ್ಯವಾಗಿದ್ದ ಲೋಕೇಶ್ ಕಳೆದ […]

Continue Reading

ನಕಲಿ ದಾಖಲೆ ಸೃಷ್ಠಿಸಿ ಜಮೀನು ಕಬಳಿಕೆ ಆರೋಪ, ಪ್ರಶ್ನೆ ಮಾಡಿದಕ್ಕೆ ಪ್ರಾಣ ಬೆದರಿಕೆ

ಯಲಹಂಕ : ನಕಲಿ ಜಮೀನು ಪತ್ರ ಸೃಷ್ಟಿಸಿ ನಮ್ಮ ಭೂಮಿಯನ್ನು ಕಬಳಿಸಿದ್ದಾರೆ ಈ ಕುರಿತು ಪ್ರಶ್ನೆ ಮಾಡಿದ ನಮ್ಮ ಮೇಲೆ ಹಲ್ಲೆ ನೆಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಆದರೆ ಇಲ್ಲಿಯವರೆಗೂ ಯಾವುದೇ ರೀತಿಯ ಸ್ಪಂದನೆ ಪೊಲೀಸ್ ಇಲಾಖೆಯಿಂದ ಸಿಕ್ಕಿಲ್ಲ, ನಮ್ಮ ಕುಟುಂಬಕ್ಕೆ ರಕ್ಷಣೆ ಹಾಗೂ ನ್ಯಾಯ ಕೊಡಿಸುವಂತೆ ದೂರುದಾರ ಹನಿಯೂರು ಶಾಂತಕುಮಾರ್ ತಿಳಿಸಿದ್ದಾರೆ.     ಮಾಧ್ಯಮದೊಂದಿಗೆ ಮಾತನಾಡಿದ ಅವರು ನಮ್ಮ ಹನಿಯೂರು ಗ್ರಾಮದ ಸರ್ವೇ ನಂಬರ್ 84/16ರಲ್ಲಿ […]

Continue Reading

*ಆಟೋ ಚಾಲಕರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಿದ ಬೆಂಗಳೂರು ಆಟೋ ಸೇನೆ*

ಯಲಹಂಕ :ರಾಜಾನುಕುಂಟೆ ಸೆ. 18( ವಿಜಯಮಿತ್ರ ) : ನಮ್ಮ ಸಂಘಟನೆ ವತಿಯಿಂದ ಚಾಲಕರಿಗಾಗಿ ವಿವಿಧ ರೀತಿಯ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜನೆ ಮಾಡಲಾಗುತ್ತಿದ್ದು. ವಾಹನ ಚಾಲಕರಿಗೆ ಸಮಸ್ಯೆ ಎದುರಾದಲ್ಲಿ ನಮ್ಮ ಬೆಂಗಳೂರು ಆಟೋ ಸೇನೆ ಸದಾ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಬೆಂಗಳೂರು ಆಟೋ ಸೇನೆ ರಾಜ್ಯಾಧ್ಯಕ್ಷ ಎಂ.ಆರ್‌.ಚೇತನ್‌ ತಿಳಿಸಿದರು. ಆಟೋಚಾಲಕರಿಗೆ ಕಾನೂನು ಅರಿವು ಮತ್ತು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರು ಆಟೋ ಸೇನೆ ವತಿಯಿಂದ ಆಟೋ ಚಾಲಕರ ಜಾಗೃತಿ ಅಭಿಯಾನ & ಜನಸ್ಪಂದನ ಕಾರ್ಯಕ್ರಮವನ್ನು ರಾಜಾನುಕುಂಟೆಯ […]

Continue Reading

*ಶೆಡ್ ಗೆ ನುಗ್ಗಿದ ಅಧಿಕಾರಿಗಳು : ಅಕ್ರಮ ಪ್ಲಾಸ್ಟರ್ ಆಫ್ ಪ್ಯಾರೀಸ್ (POP), ಬಣ್ಣ ಲೇಪಿತ ಗಣೇಶಮೂರ್ತಿ ತಯಾರಕರ ಮೇಲೆ ರೈಡ್*

ಯಲಹಂಕ ಮಾರ್ಗದ ಕೆಲ ಗಣಪತಿ ಮೂರ್ತಿ ತಯಾರಕರು ಪ್ಲಾಸ್ಟರ್ ಆಫ್ ಪ್ಯಾರೀಸ್, ಬಣ್ಣ ಲೇಪಿತ ಮತ್ತು 5 ಆಡಿಗಿಂತ ಎತ್ತರದ ಗಣೇಶ ಮೂರ್ತಿಗಳ ತಯಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಯುವ ಸಂಚಲನ ಸಂಘಟನೆ ನೀಡಿದ ದೂರಿನ ಆಧಾರದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶ್ರೀನಿವಾಸ್ ಮತ್ತು ತಂಡ ಗಣೇಶ ಮೂರ್ತಿಗಳ ತಯಾರಿಕ ಘಟಕ( ಶೆಡ್ )ಗಳ ಮೇಲೆ ದಾಳಿ ನಡೆಸಿತು. ಬಹುತೇಕ ಗಣೇಶ ಮೂರ್ತಿ ತಯಾರಿಕ ಘಟಕಗಳು ಕಾನೂನು ಬಾಹಿರವಾಗಿ ಗಣೇಶ ಮೂರ್ತಿಗಳ ತಯಾರಿಕೆಗೆ ಮುಂದಾಗಿದ್ದಾರೆ, […]

Continue Reading

*ಮಾರಸಂದ್ರ l ಶ್ರೀನಿವಾಸ ಕಲ್ಯಾಣ ಮತ್ತು ಪೂರಿಜಗನ್ನಾಥ ರಥೋತ್ಸವ ಕಾರ್ಯಕ್ರಮ l PWC ಅಪಾರ್ಟ್ಮೆಂಟ್ ನಿವಾಸಿಗಳಿಂದ ಸಂಭ್ರಮಾಚರಣೆ*

ನಮ್ಮಲ್ಲಿ ಸರ್ವ ಧರ್ಮಗಳ ಸಮ್ಮಿಲನವಾಗಿದ್ದು, ಇಂದಿನ ಶ್ರೀನಿವಾಸ ಕಲ್ಯಾಣ ಮತ್ತು ಶ್ರೀ ಪೂರಿ ಜಗನ್ನಾಥ ರಥೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನಮ್ಮ ಪ್ರಾವಿಡೆಂಟ್ ವೆಲ್ ವರ್ಥ್ ಸಿಟಿಯಲ್ಲಿ ಒಂದು ಮಿನಿ ಇಂಡಿಯಾ ವನ್ನು ಕಾಣಬಹುದಾಗಿದೆ ಎಂದು PWC ಅಪಾರ್ಟ್ಮೆಂಟ್ ನ ಅಧ್ಯಕ್ಷೆ ವಿದ್ಯಾ ಮಿಶ್ರ ತಿಳಿಸಿದರು. ಜುಲೈ 7ರಂದು ಪ್ರಾವಿಡೆಂಟ್ ವೆಲ್ ವರ್ಥ್ ಸಿಟಿಯ ನಿವಾಸಿಗಳು ಶ್ರೀನಿವಾಸ ಕಲ್ಯಾಣ ಹಾಗೂ ಪೂರಿಜಗನ್ನಾಥ ರಥೋತ್ಸವವನ್ನು ಅದ್ದೂರಿಯಾಗಿ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗೋ ಪೂಜೆ ಗಣೇಶ […]

Continue Reading

*ರಾಜಾನುಕುಂಟೆ ಯಲ್ಲಿ ಬೆಂಗಳೂರು ಆಟೋ ಸೇನೆಯ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮ*

ಪ್ರತಿನಿತ್ಯ ಆಟೋ ಚಾಲಕರು ನೂರಾರು ಸಮಸ್ಯೆಯನ್ನು ಎದುರಿಸುತ್ತಿದ್ದು. ಆಟೋ ಚಾಲಕರ ಶಕ್ತಿಯಾಗಿ ಬೆಂಗಳೂರು ಆಟೋ ಸೇನೆ ಶ್ರಮಿಸಲಿದೆ ಎಂದು ಸಂಘಟನೆ ರಾಜ್ಯಾಧ್ಯಕ್ಷ ಚೇತನ್ ತಿಳಿಸಿದರು   ರಾಜಾನುಕುಂಟೆ ವ್ಯಾಪ್ತಿಯಲ್ಲಿ ಬೆಂಗಳೂರು ಆಟೋ ಸೇನೆ ನೂತನ ಘಟಕದ ಕಛೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಳೆ ಏನದೇ ಬಿಸಿಲಿನದೇ ಪ್ರತಿನಿತ್ಯ ಸಾರ್ವಜನಿಕರ ಸೇವೆಗಾಗಿ ದುಡಿಯುವ ಆಟೋ ಚಾಲಕರು, ತಮ್ಮ ಕರ್ತವ್ಯದ ಅವಧಿಯಲ್ಲಿ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆಟೋ ಚಾಲಕರು ಅಸಂಘಟಿತರಲ್ಲ,ನಾವು ಸಂಘಟಿತರು ಎಂದು ಸಾರುವ ನಿಟ್ಟಿನಲ್ಲಿ ಬೆಂಗಳೂರು […]

Continue Reading

ಸಿ ಆರ್ ಪಿ ಎಫ್ ಪೆರೇಡ್ ಗ್ರೌಂಡ್ ನಲ್ಲಿ 5ನೇ ವರ್ಷದ ಸ್ಮರಣಾಂಜಲಿ ಕಾರ್ಯಕ್ರಮ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗಿ

ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2019ನೇ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ನ ವೀರ ಯೋಧರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ಹುತಾತ್ಮ ಯೋಧರಿಗೂ 5ನೇ ವಾರ್ಷಿಕ ಸ್ಮರಣಾಂಜಲಿ ಕಾರ್ಯಕ್ರಮವನ್ನು ಗ್ರೂಪ್ ಸೆಂಟರ್, ಸಿ ಆರ್ ಪಿ ಎಫ್ ಕ್ಯಾಂಪಸ್ ದೊಡ್ಡಬಳ್ಳಾಪುರ ರಸ್ತೆ ,ಯಲಹಂಕ ಬೆಂಗಳೂರು ಇಲ್ಲಿ ದಿನಾಂಕ 14 2 2024ರಂದು ಆಯೋಜನೆ […]

Continue Reading