ದೊಡ್ಡಬಳ್ಳಾಪುರ : 11 ನೇ ವಿಶ್ವ ಯೋಗದಿನಾಚರಣೆ ಪ್ರಯುಕ್ತ ದೊಡ್ಡತುಮಕೂರು ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ವಿಶ್ವ ಯೋಗ ದಿನವನ್ನು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ ಜಿ ಮಂಜುನಾಥ್( Lic )ರವರ ಮಾರ್ಗದರ್ಶನದೊಂದಿಗೆ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲಾಯಿತು.

ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಚೈತ್ರ ಭಾಸ್ಕರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ ಜಿ ಮಂಜುನಾಥ್( LIC), ಶಾಲೆಯ ಮುಖ್ಯ ಶಿಕ್ಷಕರಾದ ಎಂ. ಸತ್ಯವತಿ ಸೇರಿದಂತೆ ಗಣ್ಯರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಯೋಗಾಸನದ ಪ್ರಮುಖ್ಯತೆ,ಯೋಗಾಸನ ಮಾಡುವುದರಿಂದ ಜೀವನ ಶೈಲಿಯಲ್ಲಿ ಆಗುವ ಬದಲಾವಣೆ, ಅರೋಗ್ಯ ಪ್ರಯೋಜನಗಳನ್ನು ಕುರಿತಂತೆ ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಹಲವು ಸರಳ ಹಾಗೂ ಕುಳಿತು ಮಾಡುವ ಯೋಗಾಸನಗಳನ್ನು ಮಾಡಲಾಯಿತು

ಈ ಸಂದರ್ಭದಲ್ಲಿ ಚಿರಋಣಿ ಕನ್ನಡಾಂಬೆ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷ ಶ್ರೀರಾಮ್. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಚೈತ್ರಾಭಾಸ್ಕರ್, ಮಾಜಿ ಉಪಾಧ್ಯಕ್ಷರಾದ ಚೈತ್ರ ಶ್ರೀಧರ್, ಸದಸ್ಯರಾದ ಟಿ ಪಿ ಲೋಕೇಶ್, ಮುಖ್ಯಶಿಕ್ಷಕಿ ಎಂ ಸತ್ಯವತಿ , ಶಿಕ್ಷಕರಾದ ಶಮಿನ್ ಬಾನು, ಎಚ್. ಎಲ್, ನೇತ್ರಾವತಿ, ಗ್ರಂಥಪಾಲಕರಾದ ಚನ್ನಮ್ಮ, ಸ್ಥಳೀಯ ಮುಖಂಡರಾದ ವಿಜಯಲಕ್ಷ್ಮಿ, ಪುಷ್ಪ ಕಲಾ, ವನಿತಾ, ಕೃಷ್ಣಮೂರ್ತಿ, ರಮೇಶ್, ಮಂಜುನಾಥ್, ಆರ್. ಗೋವಿಂದರಾಜು, ಎಂ. ಗೋವಿಂದರಾಜು ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
