ಗಣಪತಿ ದೇವಾಲಯ ಜಿರ್ಣೋದ್ದಾರಕ್ಕೆ 1,50,000 ರೂಗಳ ಡಿಡಿ ವಿತರಣೆ

Spread the love

ದೊಡ್ಡಬಳ್ಳಾಪುರ ಅ 13 ( ವಿಜಯಮಿತ್ರ ): ತಾಲೂಕಿನ ಕನಸವಾಡಿ ಕಾಲೋನಿ ಮಧುರೆ ಹೋಬಳಿಯಗಣಪತಿ ದೇವಾಲಯ ಜಿರ್ಣೋದ್ದಾರಕ್ಕೆ 1,50,000 ರೂ ಗಳ ಡಿ ಡಿ ಯನ್ನು ತಾಲೂಕು ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ DD ವಿತರಿಸಿದರು.

 

Ad

 

ಶ್ರೀ ಕ್ಷೇತ್ರ ಧರ್ಮಸ್ಥಳ ದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ದೇವಾಲಯ ಜಿರ್ಣೋದ್ದಾರಕ್ಕೆ 1,50,000 ರೂ ಗಳನ್ನು ನೀಡಿದ್ದು ಕ್ಷೇತ್ರದ ಪರವಾಗಿ ತಾಲೂಕಿನ ಯೋಜನಾಧಿಕಾರಿ ಸುಧಾ ಬಾಸ್ಕರ್ DD ವಿತರಿಸಿ ಮಾತನಾಡಿದರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಮಾಡುತ್ತಿದ್ದು ದೇವಾಸ್ಥಾನ ಜಿರ್ಣೋದ್ದಾರ, ಡೈರಿ ಕಟ್ಟಡ,ಸ್ಮಶಾನ ಅಭಿವೃದ್ಧಿ, ಕೆರೆ ಅಭಿವೃದ್ದಿ ಹೀಗೆ ಸಮುದಾಯ ಅಭಿವೃದ್ಧಿ ಮೂಲಕ ಧರ್ಮಸ್ಥಳ ಕ್ಷೇತ್ರದಿಂದ ಅನುದಾನಗಳನ್ನು ನೀಡುತ್ತಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು

ಕಾರ್ಯಕ್ರಮದಲ್ಲಿಗ್ರಾ.ಪಂ. ಸದಸ್ಯರಾದ ವಿಜಯಕುಮಾರ್, ಒಕ್ಕೂಟದ ಅಧ್ಯಕ್ಷರಾದ ವಸಂತ್,ದೇವಸ್ಥಾನದ ಸಮಿತಿ ಸದಸ್ಯರಾದ ಉಮಾಶಂಕರ್, ರಾಮಣ್ಣ,ಸಿದ್ದರಾಮಣ್ಣ, ಪುನೀತ್,ಸುವರ್ಣಮ್ಮ,ಸಿದ್ದಲಿಂಗಯ್ಯ,ಸಮಿತಿ ಸದಸ್ಯರು ಹಾಗೂ ಮಧುರೆ ವಲಯದ ಮೇಲ್ವಿಚಾರಕಿ ಶ ಗಿರಿಜಾ ಸೇವಾಪ್ರತಿನಿಧಿಗಳಾದ ಬಸವರಾಜು, ಭಾಗ್ಯ, ಸಂಘದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.