ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರಿಗೆ ವಿಶ್ವ ಕನ್ನಡ ವಿದ್ಯಾರತ್ನ ಪ್ರಶಸ್ತಿ

Spread the love

ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರಿಗೆ ವಿಶ್ವ ದರ್ಶನ ಪತ್ರಿಕೆ “ವಿಶ್ವ ಕನ್ನಡ ವಿದ್ಯಾರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.

 

ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಾಡಿರುವ ಗಣನೀಯ ಸಾಧನೆಗಳ ಜೊತೆಗೆ ”STUDIES ON CELL SUSPENSION CULTURE & IN VITROGENE EXPRESSION OF PLUMULE DERIVED EMBRYOGENIC CALLI IN COCONUT ” ಎಂಬ ಮಹಾಪ್ರಬಂಧದ ಪ್ರಾಮುಖ್ಯತೆಯನ್ನು ಗುರುತಿಸಿ ಕರ್ನಾಟಕ ರಾಜ್ಯದ ಧಾರವಾಡದ ವಿಶ್ವ ದರ್ಶನ ಪತ್ರಿಕೆ ‘ರಾಷ್ಟ್ರೀಯ ಮತ್ತು ಐಕಾನ್ ಅವಾರ್ಡ್ ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ “ವಿಶ್ವ ಕನ್ನಡ ವಿದ್ಯಾರತ್ನ ರಾಷ್ಟ್ರೀಯ ಪ್ರಶಸ್ತಿ” ನೀಡಿ ಗೌರವಿಸಿದೆ.

 

ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ (ರಿ) ರಾಜ್ಯಕಾರ್ಯದ್ಯಕ್ಷರಾದ ಹೆಚ್.ರಾಘವೇಂದ್ರ ಮತ್ತು ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ (ರಿ) ಬೆಂ.ಗ್ರಾ.ಜಿಲ್ಲಾಧ್ಯಕ್ಷರುಪ್ರಜಾ ವಿಮೋಚನಾ ಚಳವಳಿಯ ಮುಖಂಡರಾದ ಹೆಚ್.ಶಿವಕುಮಾರ್ ಮತ್ತು ಗೆಳೆಯರ ಬಳಗ ಸನ್ಮಾನಿತ ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ರವರಿಗೆ ಶುಭ ಹಾರೈಸಿದರು

 

ಈ ಕುರಿತು ಡಾ. ಭವ್ಯಶ್ರೀ ಶೆಟ್ಟಿ ಗಾರ್ ಉದ್ಯಾವರ ಮಾತನಾಡಿ ಇಂದು ನನ್ನ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ನಮ್ಮ ಪ್ರಾಮಾಣಿಕ ಪರಿಶ್ರಮಕ್ಕೆ ವಿಶ್ವ ದರ್ಶನ ಪತ್ರಿಕೆ ‘ರಾಷ್ಟ್ರೀಯ ಮತ್ತು ಐಕಾನ್ ಅವಾರ್ಡ್ ಪ್ರಶಸ್ತಿಗಳ ಪ್ರದಾನ ಸಮಾರಂಭದ ಮೂಲಕ ಪ್ರೋತ್ಸಹ ನೀಡಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮಗೆ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗುತ್ತದೆ ಅಲ್ಲದೆ ಸೇವೆಗಳು ಮತ್ತಷ್ಟು ಹೆಚ್ಚಾಗಲಿದೆ. ನನ್ನ ಸೇವೆ ಗುರುತಿಸಿ ಅಭಿನಂದಿಸಿದ ವಿಶ್ವ ದರ್ಶನ ಪತ್ರಿಕೆ ತಂಡಕ್ಕೆ ಶುಭವಾಗಿಲಿ ಎಂದರು.

 

 

 

 

Leave a Reply

Your email address will not be published. Required fields are marked *

© 2026 Malnad TV. All Rights Reserved.