ನಿರಂತರ ಅನ್ನದಾಸೋಹ ಸಮಿತಿಗೆ ದಾನಿಗಳ ಅವಶ್ಯಕತೆ ಇದೆ – ಶಶಿಕಲಾ ನಾಗರಾಜ್

Spread the love

ದೊಡ್ಡಬಳ್ಳಾಪುರ : ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬಡವರಿಗೆ ನಿರಾಶ್ರಿತರಿಗೆ ನಿರಂತರ ಅನ್ನದಾಸೋಹ ಮಾಡುವ ಕಾರ್ಯವನ್ನು ಮಾಡುತ್ತಿರುವ ನಿರಂತರ ಅನ್ನದಾಸೋಹ ಸಮಿತಿ ಇಂದು 2008 ನೇ ದಿನಕ್ಕೆ ಕಾಲಿಟ್ಟಿದೆ ಈ ಕಾರ್ಯವು ಮತ್ತಷ್ಟು ಉನ್ನತ ಮಟ್ಟದಲ್ಲಿ ಮುಂದುವರೆಯಲಿ ಎಂದು ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ತಿಳಿಸಿದರು.

ನಿರಂತರ ಅನ್ನದಾಸೋಹ ಸಮಿತಿಯ 2008ನೇ ದಿನದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಪ್ರತಿನಿತ್ಯ ನೂರಾರು ಕುಟುಂಬಗಳು ಅನ್ನದಾಸೋಹ ಸಮಿತಿಯ ಮೇಲೆ ಅವಲಂಬಿತರಾಗಿದ್ದಾರೆ ನಿತ್ಯ ನಿರಂತರ ಸಾಗುತ್ತಿರುವ ಈ ಕಾರ್ಯಕ್ಕೆ ದಾನಿಗಳ ನೆರವು ಅಗತ್ಯವಾಗಿದ್ದು ನಿರಂತರ ಅನ್ನದಾಸೋಹ ಸಮಿತಿಗೆ ಸಹಾಯಸ್ತದ ಅವಶ್ಯಕತೆ ಇದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ (ಅಪ್ಪಿ) ಮಾತನಾಡಿ ಇಂದಿನ ಈ ಕಾರ್ಯಕ್ರಮದ ಗರಿಮೆ ಮಲ್ಲೇಶ್ ಮತ್ತು ತಂಡಕ್ಕೆ ಸಲ್ಲುತ್ತದೆ ದಾನಿಗಳನ್ನು ಹುಡುಕಿ ಅವರನ್ನು ಕರೆತಂದು ಅವರ ವಿಶೇಷ ದಿನಗಳನ್ನು ಈ ವೇದಿಕೆಯಲ್ಲಿ ಸಂಭ್ರಮಿಸುವ ಮೂಲಕ ನೂರಾರು ಕುಟುಂಬಗಳಿಗೆ ಆಹಾರ ವಿತರಣೆ ಮಾಡುತ್ತಿರುವ ಅನ್ನ ದಾಸೋಹ ಸಮಿತಿಗೆ ಶುಭವಾಗಲಿ ಎಂದರು.

 

ನಾಯಕ ನಟ (ವೀಡೆ) ಸುಧೀರ್ ನಮ್ಮ ದೈವಪುತ್ರ ಚಿತ್ರದ ಚಿತ್ರೀಕರಣಕ್ಕೆ ಮಲ್ಲೇಶ್ ಸಾಕಷ್ಟು ಸಹಕರಿಸಿದ್ದಾರೆ. ಅವರು ನನಗೆ ಕಲಾವಿದರಾಗಿಗೊತ್ತು ಆದರೆ ಅವರ ಸಮಾಜ ಸೇವೆ ಇಷ್ಟು ವಿಶಾಲವಾಗಿದೆ ಎಂಬುದು ಈ ಕಾರ್ಯಕ್ರಮಕ್ಕೆ ಬಂದ ನಂತರ ತಿಳಿದಿದೆ . ಈ ಸ್ಥಳದಲ್ಲಿ ಪ್ರತಿನಿತ್ಯ ನೂರಾರು ಕಡು ಬಡವರು, ನಿರಾಶ್ರಿತರು, ಬಡ ಕುಟುಂಬಗಳು ಆಹಾರ ಸೇವಿಸುತ್ತವೆ . ಪ್ರತಿನಿತ್ಯ ಆಹಾರ ಒದಗಿಸುವುದು ಸುಲಭದ ಕೆಲಸವಲ್ಲ ಅಂತಹ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತಿರುವ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದರು.

ಈ ಸಂದರ್ಭದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ನಾಗರಾಜು, ಸಂಖ್ಯಾ ಶಾಸ್ತ್ರಜ್ಞ ಪುಷ್ಪಲತಾ, ನಿರ್ದೇಶಕ ಸೈಯದ್ ಆಲಿ,ನಟ ರಾಮ್ ಜೀ,ನಟಿ ಅನಿತಾ ಸೇರಿದಂತೆ ಸ್ಥಳೀಯ ಮುಖಂಡರು, ಕಲಾವಿದರು, ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.