ನೆನೆಗುದ್ದಿಗೆ ಬಿದ್ದಿದ್ದ ಗ್ರಂಥಾಲಯಕ್ಕೆ ಮರು ಜೀವ : ನೂತನ ಗ್ರಂಥಾಲಯ ಉದ್ಘಾಟನೆ

Spread the love

ಸ್ಥಳೀಯ ವಿದ್ಯಾರ್ಥಿಗಳು ಓದುಗರ ಅನುಕೂಲಕ್ಕಾಗಿ ನಗರದ 12ನೇ ವಾರ್ಡ್ ನಲ್ಲಿ 1200ಕ್ಕೂ ಅಧಿಕ ಪುಸ್ತಕ ಭಂಡಾರ ಹೊಂದಿರುವ ಸುಸಜ್ಜಿತ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಾಯಿತು.

 

ಸ್ಥಳೀಯ ಶಾಸಕ ಧೀರಜ್ ಮುನಿರಾಜು ನಗರಸಭಾ ಅಧ್ಯಕ್ಷ ಸುಮಿತ್ರ ಆನಂದ್ , ಸ್ಥಳೀಯ ನಗರಸಭಾ ಸದಸ್ಯ ಶಿವ.ಎಂ (ಶಿವರಾಜ್ ), ಹಾಗೂ ಎಲ್ಲಾ ನಗರಸಭೆ ಸದಸ್ಯರು, ಗಣ್ಯರ ಜೊತೆಗೂಡಿ ನೂತನ ಗ್ರಂಥಾಲಯವನ್ನು ಉದ್ಘಾಟಿಸಿದರು.

ಈ ಕುರಿತು ಸ್ಥಳೀಯ ಮುಖಂಡರು ಹಾಗೂ ವಕೀಲರಾದ ನಾಗೇಂದ್ರ ಮಾತನಾಡಿ ವಿದ್ಯೆಎಂಬುದು ಕಳವು ಮಾಡಲಾಗದ ಸಂಪತ್ತು, ಹಾಗಾಗಿ ಕಲಿಕೆಗೆ ಅವಶ್ಯಕವಾಗಿರುವ ಜ್ಞಾನ ಸಂಪತ್ತನ್ನು ಹೊಂದಿರುವ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಗ್ರಂಥಾಲಯವನ್ನು ವೀರಭದ್ರನ ಪಾಳ್ಯದಲ್ಲಿ ಉದ್ಘಾಟಿಸಲಾಗಿದೆ. ಸ್ಥಳೀಯ ಯುವಕರು ವಿದ್ಯಾರ್ಥಿಗಳು ಓದುಗರು ಈ ಗ್ರಂಥಾಲಯವನ್ನು ಸದ್ಭಾಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಜಕೀಯ ಕಾರಣಗಳಿಂದ ಈಗಾಗಲೇ ಉದ್ಘಾಟನೆ ಆಗಬೇಕಿದ್ದ ಗ್ರಂಥಾಲಯವು ನೆನೆಗುದಿಗೆ ಬಿದ್ದಿತ್ತು , ಸ್ಥಳೀಯ ಯುವಕರ ಪರಿಶ್ರಮದಿಂದಾಗಿ ಇಂದು ಗ್ರಂಥಾಲಯ ಗಣ್ಯರ ಮುಖೇನ ಲೋಕಾರ್ಪಣೆಗೊಂಡಿದೆ . ಸ್ಪರ್ಧಾತ್ಮಕ ಐಎಎಸ್, ಕೆಎಎಸ್,ಪಿಡಿಒ, ಆರಕ್ಷಕ ಪೇದೆ, ಇತರೆ ಪರೀಕ್ಷೆಗಳಿಗೆ ಅವಶ್ಯಕ ಮಾಹಿತಿ ಉಳ್ಳ ಪುಸ್ತಕಗಳು ಈ ಗ್ರಂಥಾಲಯದಲ್ಲಿ ಲಭ್ಯವಾಗಲಿದೆ ಹಾಗಾಗಿ ಸ್ಥಳೀಯ ಯುವಕರು ಓದುಗರು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳುವ ಗ್ರಂಥಾಲಯದ ಘನತೆ ಹೆಚ್ಚಿಸುವಲ್ಲಿ ಶ್ರಮಿಸಬೇಕು ಎಂದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಪ್ರಭಾಕರ್, ಲಾರಿ ದೊಡ್ಡಯ್ಯ, ಚಂದ್ರಕುಮಾರ್, ವಿಜಯಕುಮಾರ್, ಚೇತನ್ ಕುಮಾರ್, ಕೆಂಪರಾಜ್, ಅಭಿಷೇಕ್, ನವೀನ್, ಅಭಿಲಾಷ್ , ಮಂಜುನಾಥ್, ಮುನಿರಾಜು, ರಮೇಶ್, ಸಂತೋಷ್, ರಾಜೇಶ್. ವಿಶ್ವ. ಮಹೇಶ್, ಕೋಟಿ ಮುನಿಯಪ್ಪ, ಶಿವರಾಜ್ ಇದ್ದರು

 

 

Leave a Reply

Your email address will not be published. Required fields are marked *

© 2026 Malnad TV. All Rights Reserved.