ಶಿಕ್ಷಣ ಕ್ಷೇತ್ರ ಚುನಾವಣೆ : ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉಸ್ತುವರಿಯಾಗಿ ಡಾ|| ಸೌಮ್ಯ ರವರನ್ನು ನೇಮಿಸಿದ ಕೆಪಿಸಿಸಿ

Spread the love

ಬೆಂಗಳೂರು ಗ್ರಾಮಾಂತರ : 2026ರ ಶಿಕ್ಷಣ ಕ್ಷೇತ್ರ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉಸ್ತುವರಿಯಾಗಿ ಡಾ|| ಸೌಮ್ಯ ರವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಪದವೀಧರರ ವಿಭಾಗ)ನೇಮಿಸಿ ಆದೇಶ ಹೊರಡಿಸಿದೆ

ಮುಂಬರುವ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಕೆಪಿಸಿಸಿ ಪದವೀಧರರ ವಿಭಾಗದ ವತಿಯಿಂದ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿ ಕೆಪಿಸಿಸಿ ಮುಖ್ಯ ವಕ್ತಾರರು ಹಾಗೂ ಕೆಪಿಸಿಸಿ ಪದವಿದರ ವಿಭಾಗದ ಅಧ್ಯಕ್ಷರಾದ ಎ ಎನ್ ನಟರಾಜ್ ಗೌಡ ಉಸ್ತುವಾರಿಗಳ ಪಟ್ಟಿಗೆ ಅನುಮೋದನೆ ನೀಡುವಂತೆ ಕೋರಿ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ರವಾನಿಸಿದ್ದಾರೆ.

2026ರಲ್ಲಿ ನಡೆಯುವ ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಕರ್ನಾಟಕ ವಿಧಾನ ಪರಿಷತ್ತಿನ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪದವೀಧರರ ವಿಭಾಗದ ಪದಾಧಿಕಾರಿಗಳನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ಆಯ್ಕೆ ಮಾಡಿದ್ದು ಸದರಿ ಪದಾಧಿಕಾರಿಗಳು ತಮಗೆ ವಹಿಸಲಾಗಿರುವ ಕ್ಷೇತ್ರದಲ್ಲಿ ಪಕ್ಷದ ಮುಖಂಡರುಗಳ ಸಹಯೋಗದೊಂದಿಗೆ ಮತದಾರರ ಪಟ್ಟಿಗೆ ಸದಸ್ಯತ್ವವನ್ನು ನೋಂದಣಿ ಮಾಡಿಸಲು ಕ್ರಮವಹಿಸುವಂತೆ ನಿರ್ದೇಶಿಸಲಾಗಿದೆ. ಆದ್ದರಿಂದ ತಾವು ದಯಮಾಡಿ ಈ ಆಯ್ಕೆ ಪಟ್ಟಿಗೆ ಅನುಮೋದನೆ ನೀಡುವಂತೆ ತಮ್ಮಲ್ಲಿ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ

ಪದವೀಧರರು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣಾ ಉಸ್ತುವಾರಿಗಳ ಪಟ್ಟಿ ಇಂತಿದೆ :-

ಭರತ್ ಬೆಂಗಳೂರು ಉತ್ತರ, ಪ್ರಶಾಂತ್ ಬೆಂಗಳೂರು ದಕ್ಷಿಣ, ವೆಂಕಟೇಶ್ ಬೆಂಗಳೂರು ಕೇಂದ್ರ, ಶಿಕಂದರ್ ಬೆಂಗಳೂರು ಪೂರ್ವ, ಮದೂಸೂದನ ಬೆಂಗಳೂರು ಪಶ್ಚಿಮ, ಡಾ. ಸೌಮ್ಯ ಬೆಂಗಳೂರು ಗ್ರಾಮಾಂತರ, ಎನ್ ಶೋಭಾ ರಾಮನಗರ.

 

ಈ ಕುರಿತು ಬೆಂಗಳೂರು ಗ್ರಾಮಾಂತರ ಉಸ್ತುವಾರಿಗಳಾಗಿ ಆಯ್ಕೆಯಾಗಿರುವ ಡಾ. ಸೌಮ್ಯ ಮಾತನಾಡಿ ನನ್ನ ಮೇಲೆ ಭರವಸೆ ಇಟ್ಟು ನನಗೆ ನೀಡಿರುವ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿಭಾಯಿಸುತ್ತೇನೆ . ನನ್ನನ್ನು ನೇಮಕ ಮಾಡಿದ ರಾಜ್ಯದ ಹೆಮ್ಮೆಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್, ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ ಎಚ್ ಮುನಿಯಪ್ಪ ಜೀ ಸೇರಿದಂತೆ ಪಕ್ಷದ ಎಲ್ಲಾ ಪ್ರಮುಖರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖವಾಗಿ ನನ್ನಗೆ ಸದಾ ಬೆಂಬಲವಾಗಿರುವ ನನ್ನ ರಾಜಕೀಯ ಗುರುಗಳಾದ ದಿವಂಗತ ವೆಂಕಟಸ್ವಾಮಿ, ತಾಲ್ಲೂಕಿನ ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯ, ಶಾಸಕರಾದ ಶರತ್ ಬಚ್ಚೇಗೌಡ, ಮಾರ್ಗದರ್ಶಕರಾದ ಜಿ ಸಿ ಚಂದ್ರಶೇಖರ್ ನಟರಾಜ್ ಗೌಡ , ಶ್ರೀನಿವಾಸ್ , ಸಿ ಆರ್ ಗೌಡ , ರಾಮೋಜಿ ಗೌಡ , ಪುಟ್ಟಣ್ಣ, ಎಸ್ ರವಿ, ರಕ್ಷಾರಾಮಯ್ಯ, ಎಸ್ ಆರ್ ಮುನಿರಾಜು , ಅರವಿಂದ ನರಸಿಂಹಸ್ವಾಮಿ , ಮುನಿಕೃಷ್ಣಪ್ಪ , ಜಯಕಾಂತಮ್ಮ , ರೇವತಿ ಅನಂತರಾಮ್ , ರವಿ ಸಿದ್ದಪ್ಪ, ಎಚ್ ಎನ್ ನರಸಿಂಹಮೂರ್ತಿ , ಅಶ್ವಥಪ್ಪ , ಆದಿನಾರಾಯಣ ಸೇರಿದಂತೆ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಎಲ್ಲ ಮುಖಂಡರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.