1318 ನೇ ದಿನದ ಅನ್ನದಾಸೋಹ ಕಾರ್ಯಕ್ರಮ : ವಿಶೇಷ ದಿನಗಳನ್ನು ನಮ್ಮೊಂದಿಗೆ ಆಚರಿಸಿ – ಮಲ್ಲೇಶ್‌

Spread the love

ದೊಡ್ಡಬಳ್ಳಾಪುರ :

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ದರ್ಗಾ ಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸತತವಾಗಿ ಕಳೆದ ಮೂರು ನಾಲ್ಕು ವರ್ಷಗಳಿಂದ ಕಡುಬಡವರಿಗೆ ಮಲ್ಲೇಶ್ ಮತ್ತು ತಂಡ ದಾನಿಗಳ ನೆರವಿನಿಂದ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿದ್ದು

ಇಂದು ವಿ ಎಸ್ ಡಿ ಕೆ ಚಿಕನ್ ಸೆಂಟರ್ ನ ಮಾಲೀಕರಾದ ಕಿರಣ್ ಮತ್ತು ವೈಷ್ಣವಿ ಹೋಟೆಲ್ ಮಾಲೀಕರಾದ ಮಧುಸೂಧನ್ (ಅಪ್ಪು) ರವರ ಸಹಯೋಗದೊಂದಿಗೆ ಶ್ರೀ ಕಿರಣ್ ರವರ ಹುಟ್ಟು ಹಬ್ಬದ ಅಂಗವಾಗಿ 1318 ನೇ ದಿನದ ಅನ್ನದಾಸೋಹ ಕಾರ್ಯಕ್ರಮವನ್ನು ನಡೆಸಲಾಯಿತು ..

ಈ ಸಂದರ್ಭದಲ್ಲಿ ಕಿರಣ್ ರವರು ಮಾತನಾಡಿ ಹಸಿದ ಹೊಟ್ಟೆಗೆ ಊಟ ನೀಡುವುದು ಉತ್ತಮ ಕಾರ್ಯ ಹಸಿವಿಗೆ ಜಾತಿ ಧರ್ಮಗಳ ಬೇಧವಿಲ್ಲ ನನ್ನ ಹುಟ್ಟು ಹಬ್ಬವನ್ನು ಇಂದು ಅನ್ನ ದಾಸೋಹ ಮಾಡುವ ಮೂಲಕ ಆಚರಿಸಿಕೊಂಡಿದ್ದೇನೆ, ಮುಂದೆಯೂ ಸಹ ಇದೇ ರೀತಿ ನಮ್ಮ ಬೆಂಬಲ ಅನ್ನದಾಸೋಹ ಸಮಿತಿಗೆ ನೀಡಲಾಗುವುದು ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಮಧುಸೂದನ್ ಮಾತನಾಡಿ
ಮಲ್ಲೇಶ್ ರವರ ತಂಡ ಮಾಡುತ್ತಿರುವ ಕಾರ್ಯ ಶ್ಲಾಘನೀಯ ನಮ್ಮ ಸಹಕಾರ ಎಂದಿಗೂ ಮಲ್ಲೇಶ್ ಮತ್ತು ತಂಡಕ್ಕೆ ಇರುತ್ತದೆ ಎಂದು ತಿಳಿಸಿದರು

 

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಸಾರ್ವಜನಿಕರು ,ದಾನಿಗಳು ದಯಮಾಡಿ ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಬಡವರಿಗೆ ಅನ್ನದಾಸೋಹ ನಡೆಸುವ ಮುಖಾಂತರ ಆಚರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಅನ್ನ ದಾಸೋಹ ಸಮಿತಿಯ ಸದಸ್ಯರು ಉಪಸ್ಥಿತಿದ್ದರು..

Leave a Reply

Your email address will not be published. Required fields are marked *

© 2026 Malnad TV. All Rights Reserved.