ಬಾದಾಮಿ ಬನಶಂಕರಿದೇವಿಗೆ ಹಂಪೆ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನದ ವತಿಯಿಂದ ಹಂಪೆಯಿಂದ ಬಾದಮಿ ಕ್ಷೇತ್ರದವರೆಗೆ ಪಿತಾಂಬರ ಸೀರೆ ವಸ್ತ್ರವನ್ನು ಪಲ್ಲಕ್ಕಿಯಲ್ಲಿ ಹೊತ್ತು ಪಾದಯಾತ್ರೆಯ ಮೂಲಕದ ತಂದು ಬನಶಂಕರಿದೇವಿಯ ಸನ್ನಿದಿಯಲ್ಲಿ ದೇವಾಸ್ಥಾನದ ಮುಖ್ಯ ಅರ್ಚಕರಿಗೆ ಪಿತಾಂಬರ ಸೀರೆಯನ್ನ ಸಮರ್ಪಣೆ ಮಾಡಲಾಯಿತು
ಈ ಪಿತಾಂಬರ ಸೀರೆ ವಸ್ತ್ರವನ್ನು ಬನದ ಹುಣ್ಣಿಮೆಯ ದಿನ ಅಭಿಷೇಕದ ನಂತರ ಬ್ರಾಹ್ಮಿಕಾಲದಲ್ಲಿ ತಾಯಿ ಜಗನ್ಮಾತೆ ಬನಶಂಕರಿದೇವಿಗೆ ಪ್ರಥಮವಾಗಿ ಈ ಪಿತಾಂಬರ ಸೀರೆಯನ್ನ ಉಡಿಸಲಾಗುತ್ತದೆ. ತದನಂತರ ಇನ್ನಿತರ ವಸ್ತ್ರಗಳು, ಆಭರಣಗಳು ಹೂ-ಮಾಲೆಗಳೊಂದಿಗೆ ಅಲಂಕೃತಗೊಳಿಸಲಾಗುತ್ತದೆ ಎಂದು ಹಂಪೆ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನ ಶ್ರೀ ದಯಾನಂದಪುರಿ ಸ್ವಾಮೀಜಿಯವರು ತಿಳಿಸಿದರು.
