ದೊಡ್ಡಬಳ್ಳಾಪುರ : ಹುಸ್ಕೂರು ಗ್ರಾಮದ ಸರ್ವೆ ನಂ.37 ರಲ್ಲಿ 0-13 ಗುಂಟೆ ಜಮೀನಿನ ಮೂಲ ದಾಖಲೆಗಳಿಲ್ಲದೆ ದಾಖಲೆಗಳನ್ನು ತಿರುಚಿ ಅಕ್ರಮವಾಗಿ ಕ್ರಯ ನೋಂದಣಿ ಮಾಡಿಕೊಂಡು ನಮ್ಮ ಜಮೀನು ಕಬಳಿಸಲು ಸಂಚು ರೂಪಿಸಿಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಸ್ಕೂರು ಗ್ರಾಮದ ಸರ್ವೆ ನಂ.37 ರಲ್ಲಿ 0-13 ಗುಂಟೆ ಜಮೀನನ್ನು ಅಕ್ರಮವಾಗಿ ಕ್ರಯನೋಂದಣಿ ಮಾಡಿಕೊಂಡಿದ್ದಾರೆ, ನನ್ನ ತಂದೆಯವರಾದ ಹನುಮಂತರಾಯಪ್ಪ ಅವರು ದಿನಾಂಕ:-18/04/1964 ರ ಕ್ರಯಪತ್ರ 180/64-65 ರ ಮೂಲಕ ಖದೀದಿಸಿ ಕ್ರಯ ನೋಂದಣಿ ಮಾಡಿಕೊಂಡಿರುವ ಸ್ಥಳ ಇದಾಗಿದೆ.
ಗ್ರಾಮದ ಸರ್ವೆ ನಂ.37 ರಲ್ಲಿ 0-13.8 ಗುಂಟೆ ಜಮೀನು ದೊಡ್ಡಬಳ್ಳಾಪುರ ಸಿವಿಲ್ ನ್ಯಾಯಲಯದ ದಾವೆ ಸಂಖ್ಯೆ O.S No.327/2016 ರ ಮೂಲಕ ನನ್ನ ಭಾಗಾಂಶಕ್ಕೆ ಬಂದಿರುತ್ತದೆ,ಆದರೆ ಈ ಸ್ಥಳವನ್ನು ಕೆಲವರು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಖಾತೆಯನ್ನು ವರ್ಗಾವಣೆ ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದ್ದಾರೆ.
ನಾವು ಸುಮಾರು 60 ವರ್ಷಗಳಿಂದ ಸ್ವಾಧೀನ ಹಾಗೂ ಅನುಭವದಲ್ಲಿ ಇದ್ದು, ನಾವು ಈ ಜಮೀನಿನಲ್ಲಿ ನಿರಂತರವಾಗಿ ರಾಗಿ ಜೋಳ ದನಗಳಿಗೆ ಮೇವು ಬೆಳೆಯುವ ಮೂಲಕ ಜೀವನ ಸಾಗಿಸಿದ್ದೇವೆ , ನಿರಂತರ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ, ನಮ್ಮ ಜಮೀನ್ನು ಕಬಳಿಸುವ ಉದ್ದೇಶದಿಂದ ದಾಖಲೆಗಳನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ಕ್ರಯ ಮಾಡಿಕೊಂಡಿರುವ ಕೆಲವರು ಜಮೀನು ಬಿಟ್ಟು ಕೊಡುವಂತೆ ಒತ್ತಡ ಹೇರುತ್ತಿದ್ದಾರೆ ಅವರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ರೀತಿ ಕ್ರಮಕೈಗೊಂಡು ನಮಗೆ ನ್ಯಾಯ ಒದಗಿಸಬೇಕೆಂದು ರಮೇಶ್ ಮನವಿ ಮಾಡಿದ್ದಾರೆ.

