ಖ್ಯಾತ ಉದ್ಯಮಿ ರತನ್ ಟಾಟಾ ಇನ್ನಿಲ್ಲ

ಮುಂಬೈ : ಖ್ಯಾತ ಉದ್ಯಮಿ, ದೇಶ ಖಂಡ ಮಹಾನ್ ವ್ಯಕ್ತಿ ರತನ್ ಟಾಟಾ ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಮುಂಬೈನ ಬ್ರಿಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ (86) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಧನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ.  

Continue Reading

ಅಭಿಮಾನಿಗಳಿಂದ ಯುವಮುಖಂಡ ರಾಮಕೃಷ್ಣ ಅವರ ಹುಟ್ಟುಹಬ್ಬ ಆಚರಣೆ : ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿ

ದೊಡ್ಡಬಳ್ಳಾಪುರ ಅ. 05 (ವಿಜಯಮಿತ್ರ ) : ತಾಲ್ಲೂಕಿನ ಯುವ ಮುಖಂಡ, ತಾಲ್ಲೂಕು ಭೋವಿ ಸಮುದಾಯ(occ ) ಘಟಕದ ಅಧ್ಯಕ್ಷ ರಾಮಕೃಷ್ಣ ರವರ 37 ನೇ ಹುಟ್ಟುಹಬ್ಬದ ಆಚರಣೆಯನ್ನು ತಾಲ್ಲೂಕಿನ OCC ಕಚೇರಿಯಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ಭೋವಿ ಸಮುದಾಯದ ರಾಜ್ಯ ಹಿರಿಯ ಮುಖಂಡ ಮಾಕಳಿ ರವಿ ಸೇರಿದಂತೆ ಹಲವು ಮುಖಂಡರು ಸಮಾಜಸೇವಕರು ಭಾಗವಹಿಸಿ ರಾಮಕೃಷ್ಣ ಅವರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಧ್ಯಮಗಳೊಂದಿಗೆ ಮಾಕಳಿ ರವಿ ಮಾತನಾಡಿ ರಾಜ್ಯದಾದ್ಯಂತ ನಮ್ಮ ಭೋವಿ ಸಮುದಾಯದ ಬಂಧುಗಳನ್ನು […]

Continue Reading

ಮಹಾತ್ಮಗಾಂಧೀಜಿ ತನ್ನ ಸತ್ಯ, ಅಹಿಂಸೆಯ ಸಿದ್ಧಾಂತದಿಂದಲೇ ಜಗವನ್ನು ಗೆದ್ದ ಚೇತನ – ತ. ನ. ಪ್ರಭುದೇವ್

ದೊಡ್ಡಬಳ್ಳಾಪುರ ಅ 02(ವಿಜಯಮಿತ್ರ ): ಮಹಾತ್ಮ ಗಾಂಧೀಜಿ ಅವರು ಭಾರತೀಯರ ಮನಸ್ಸಿನಲ್ಲಿ ಮಾತ್ರವಲ್ಲದೆ  ವಿಶ್ವದಾದ್ಯಂತ  ಜನರ  ಮನಸೆಳೆಯದವರು.  ವಿಶ್ವಸಂಸ್ಥೆ  ಮಹಾತ್ಮ‌ ಗಾಂಧೀಜಿ ಜನ್ಮದಿನವನ್ನು  ವಿಶ್ವ ಅಹಿಂಸಾ ದಿನವನ್ನಾಗಿ  ಆಚರಿಸಲಾಗುತ್ತದೆ ಎಂದು ಕನ್ನಡಪರ  ತ.ನ.ಪ್ರಭುದೇವ ತಿಳಿಸಿದರು.   ಅವರು ದೊಡ್ಡಬಳ್ಳಾಪುರ ನಗರದ ಮಹಾತ್ಮಗಾಂಧಿ ಪ್ರತಿಮೆಯ‌    ಆವರಣದಲ್ಲಿ  ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ  ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.     ಮಹಾತ್ಮಗಾಂಧೀಜಿ ಅವರ  ಸತ್ಯಾಗ್ರಹ ಮತ್ತು ಅಹಿಂಸಾತ್ಮಕ ಪ್ರತಿರೋಧ  ಭಾರತ […]

Continue Reading

ಮಹಾತ್ಮ ಗಾಂಧೀಜಿಯವರು ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ – ಡಾ. ಎಂ ಚಿಕ್ಕಣ್ಣ

ದೊಡ್ಡಬಳ್ಳಾಪುರ: ಹರಿಜನ್, ನವಜೀವನ್, ಯಂಗ್ ಇಂಡಿಯಾ ಮುಂತಾದ ಪತ್ರಿಕೆಗಳನ್ನು ಆರಂಭಿಸಿದ ಗಾಂಧೀಜಿ ತನ್ನ ಬರವಣಿಗೆಯನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಅಸ್ತ್ರವಾಗಿ ಬಳಸಿಕೊಂಡಿದ್ದರು ಎಂದು ಶ್ರೀ ದೇವರಾಜ ಅರಸ್ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಜೆ. ರಾಜೇಂದ್ರ ಹೇಳಿದರು.   ಶ್ರೀ ದೇವರಾಜ ಅರಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಅವರ 155ನೇ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.   ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಾತ್ಮ ಗಾಂಧೀಜಿ ಅವರು […]

Continue Reading

ಕಸವನ್ನು ಸ್ವಚ್ಛಗೊಳಿಸಿ ಸಸಿ ನೆಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಿಂದ ಸ್ವಚ್ಚತಾ ದಿನಾಚರಣೆಗೆ ಚಾಲನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅ 02 (ವಿಜಯಮಿತ್ರ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛ ಭಾರತ ದಿನಾಚರಣೆಗೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಸವನ್ನು ಸ್ವಚ್ಚಗೊಳಿಸಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಶುಚಿತ್ವ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷವು ‘ಸ್ವಚ್ಛತಾ […]

Continue Reading

*ಸಬರಮತಿ ಯಿಂದ ದಂಡಿಯವರೆಗೆ ಗಾಂದೀಜಿ ನಡೆಸಿದ ದಂಡಿ ಯಾತ್ರೆಯ ಮಾರ್ಗ ಸುಮಾರು 388 ಕಿಮೀ ರಸ್ತೆ ಅಭಿವೃದ್ಧಿ ಮಾಡಿದ ಕೀರ್ತಿ ನಂದು ಸಚಿವ ಮುನಿಯಪ್ಪ*

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಕ್ಟೋಬರ್ 02 (ವಿಜಯಮಿತ್ರ):- ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆಯನ್ನು ಸಚಿವ ಕೆ ಹೆಚ್ ಮುನಿಯಪ್ಪ ಅವರ ನೇತೃತ್ವದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಮುಕ್ತಗೊಳಿಸಿದವರು, ಜಗತ್ತು ಮೆಚ್ಚಿಕೊಂಡ ಮಹಾನ್ ಚೇತನರು. ಗಾಂಧೀಜಿಯವರು ರಾಷ್ಟ್ರಪಿತರೆಂದೇ ಪ್ರಸಿದ್ಧರಾದವರು. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾ ನೀತಿಯನ್ನು ಪ್ರತಿಪಾದಿಸುವ ಮೂಲಕ ಸ್ವಾತಂತ್ರ್ಯ ಸಂಗ್ರಾಮ ರೂವಾರಿಯಾಗಿ ಸ್ವಾತಂತ್ರ್ಯ ತಂದುಕೊಟ್ಟರು.   ಗಾಂಧೀಜಿ ತನ್ನ ಸತ್ಯ, […]

Continue Reading

* ಕೆರೆಯಲ್ಲಿ ತೆಪ್ಪದ ಮೇಲೆ ಕುಳಿತು ಪ್ರತಿಭಟನೆ : ಶುದ್ಧ ನೀರು ಕೊಡುವಂತೆ ಆಗ್ರಹಿಸಿ ಉಪವಾಸಕ್ಕೆ ಮುಂದಾದ ಗ್ರಾಮಸ್ಥರು*

ದೊಡ್ಡಬಳ್ಳಾಪುರ ಅ 02( ವಿಜಯಮಿತ್ರ): ದೇಶದಾದ್ಯಂತ ಗಾಂಧಿ ಜಯಂತಿ ಆಚರಣೆ ಮಾಡಲಾಗಿದೆ ಆದರೆ ದೊಡ್ಡ ತುಮಕೂರು ಗ್ರಾಮಸ್ಥರು ಶುದ್ಧ ನೀರಿಗಾಗಿ ಮಹಾತ್ಮ ಗಾಂಧೀಜಿಯವರ ಹೋರಾಟದ ಮಾರ್ಗವನ್ನು ಅನುಸರಿಸಿದ್ದಾರೆ. ಹೌದು ಗ್ರಾಮಸ್ಥರು ಕೆರೆಯಲ್ಲಿ ತೆಪ್ಪದ ಮೇಲೆ ಕೂತು ಉಪವಾಸ ಸತ್ಯಾಗ್ರಹ ನಡೆಸಿದರು,   ದೊಡ್ಡ ತುಮಕೂರು ಕೆರೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆನೀರು ಕ್ಲೊಯು ಹಾಗೂ ಶುದ್ಧ ನೀರು ಕೊಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅರ್ಕಾವತಿ ನದಿ ಪಾತ್ರದಲ್ಲಿ ಬರುವ ಕೆರೆಗಳು ಸಂಪೂರ್ಣ ವಿಷವಾಗಿವೆ, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ […]

Continue Reading

ದಸರಾ ಸಿಎಂ ಕಪ್ ಯೋಗ ಸ್ಪರ್ಧೆ 2024 ಕ್ಕೆ ದೊಡ್ಡಬಳ್ಳಾಪುರದ ಯೋಗಪಟುಗಳು ಆಯ್ಕೆ

ಮೈಸೂರು ವಿಶ್ವವಿದ್ಯಾನಿಲಯದ ಪೆವಿಲಿಯನ್ ಯೋಗ ಸಂಭಾಗಣದಲ್ಲಿ  ಅಕ್ಟೋಬರ್ 3 ರಿಂದ 6 ತನಕ ನಡೆಯಲಿರುವ ದಸರಾ ಸಿಎಂ ಕಪ್ ಯೋಗ ಸ್ಪರ್ಧೆ 2024 ಪಂದ್ಯಾವಳಿಗೆ ದೊಡ್ಡಬಳ್ಳಾಪುರ ನವ್ಯಶ್ರೀ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ‌     ತಾಲ್ಲೂಕಿನ ಯೋಗ ವಿದ್ಯಾರ್ಥಿಗಳಾದ  ಎಸ್.ಅದ್ವೈತ್,   ಆರ್.ನಿರೂಪಗೌಡ ,  ಬಿ.ಎಂ.ಕೀರ್ತನ, ಎಸ್.ಪಾವನಿ, ಆರ್. ವರ್ಷ ಮತ್ತು  ತೃಪ್ತಿ ಎನ್ ಶರತ್   ಶಿವಮೊಗ್ಗದಲ್ಲಿ ನಡೆದ ವಿಭಾಗೀಯ ಮಟ್ಟದ  ದಸರಾ ಯೋಗ ಸ್ಪರ್ಧೆಯಲ್ಲಿ ವಿಜೇರಾಗುವ ಮೂಲಕ  ಮೈಸೂರಿನಲ್ಲಿ ನಡೆಯುವ ದಸರಾ ಸಿಎಂ ಕಪ್ […]

Continue Reading

ಸಾರ್ವಜನಿಕರ ಮನೋರಂಜನೆಗಾಗಿ ಸಿದ್ಧವಾಗಿದೆ ಫಾರಿನ್ ಸೆಲ್ಫಿ ಎಕ್ಸಿಬಿಷನ್( ದಸರಾ ಉತ್ಸವ ಮೇಳ )

ದೊಡ್ಡಬಳ್ಳಾಪುರ : ತಾಲೂಕಿನ ಜನತೆಯ ಮನೋರಂಜನೆಗಾಗಿ ಎಸ್ಎಂಎಂಎಸ್ ಗ್ರೂಪ್ ವತಿಯಿಂದ ಫಾರಿನ್ ಸೆಲ್ಫಿ ಸ್ಪಾಟ್ ಜೊತೆಗೆ ಅಮೂಜ್ಮೆಂಟ್ ಪಾರ್ಕ್ ( ಬೃಹತ್ ಎಕ್ಸಿಬಿಷನ್ )ಆಯೋಜನೆ ಮಾಡಲಾಗಿದೆ. ನಗರದ ಹಾಲಿನ ಡೈರಿ ಮುಂಭಾಗ ಸಮೃದ್ಧಿ ಹೋಟೆಲ್ ಹಿಂಭಾಗ ಸಂಪೂರ್ಣ ಕುಟುಂಬದ ಮನೋರಂಜನೆಗಾಗಿ ಫಾರಿನ್ ಸೆಲ್ಫಿ ಎಕ್ಸಿಬಿಷನ್ ನಲ್ಲಿ ರಿಯಲ್ ಫಿಶ್ ಜೊತೆಗೆ ದಸರಾ ಉತ್ಸವ ಮೇಳವನ್ನು ಆಯೋಜನೆ ಮಾಡಲಾಗಿದ್ದು. ವಿನೋದಮಯ ಆಟಗಳನ್ನು ಒಳಗೊಂಡಂತೆ ನೂರಾರು ವಿಶೇಷ ತಿನಿಸುಗಳ ಮಳಿಗೆಗಳನ್ನು ಆಯೋಜನೆ ಮಾಡಲಾಗಿದೆ. ಸಂಪೂರ್ಣ ಕುಟುಂಬಕ್ಕೆ ಭರ್ಜರಿ ಎಂಟರ್ಟೈನ್ಮೆಂಟ್ ಪ್ಯಾಕೇಜ್ […]

Continue Reading

ಮಹಾಲಯ ಅಮಾವಾಸ್ಯೆಗೆ ಬಿಗ್ ಶಾಕ್ : ನಾಳೆ ಮದ್ಯ, ಮಾಂಸ ಮಾರಾಟಕ್ಕಿಲ್ಲ ಅವಕಾಶ : ಕಟ್ಟುನಿಟ್ಟಾಗಿ ಆದೇಶ ಪಾಲಿಸಲು ಜಿಲ್ಲಾಧಿಕಾರಿಗಳ ಸೂಚನೆ

ದೊಡ್ಡಬಳ್ಳಾಪುರ ಅ 01 : ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಜಿಲ್ಲೆಯಾದ್ಯಂತ ಮಾಂಸ ಹಾಗೂ ಮದ್ಯ ಮಾರಾಟವನ್ನು ನಿಷೇದಿಸಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ವತಿಯಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.   ಅಕ್ಟೋಬರ್ 2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಶಾಂತಿ ಮತ್ತು ಅಹಿಂಸಾ ತತ್ವಗಳನ್ನು ಪಾಲಿಸುವ ಸುಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಮಾಂಸ ಹಾಗೂ ಮದ್ಯ ಮಾರಾಟವನ್ನು 01.10.2024 ರ ರಾತ್ರಿ 11-00 ಗಂಟೆಯಿಂದ 02.10.20240 ರಾತ್ರಿ 12-00 ಗಂಟೆಯವರೆಗೆ ನಿಷೇಧಿಸಿ ಆದೇಶಿಸಿದೆ ಹಾಗೂ […]

Continue Reading