ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾರಸಂದ್ರ ಗ್ರಾಮಸ್ಥರಿಂದ 15ನೇ ವರ್ಷದ ಲಕ್ಷದೀಪೋತ್ಸವ : ಗ್ರಾಮದ ಶ್ರೀ ಕೊಂಡದಮ್ಮ (ಈರಮಾಸ್ತಮ್ಮ) ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮ

ದೊಡ್ಡಬಳ್ಳಾಪುರ : ಶ್ರೀ ಕೊಂಡದಮ್ಮ ಈರಮಾಸಮ್ಮ ತಾಯಿಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ತಾಲ್ಲೂಕಿನ ಮಧುರೆ ಹೋಬಳಿಯ ಮಾರಸಂದ್ರ ಗ್ರಾಮದ ಶ್ರೀ ಕೊಂಡದಮ್ಮ (ಈರಮಾಸ್ತಮ್ಮ) ಸೇವಾ ಸಮಿತಿ (ರಿ.)ವತಿಯಿಂದ 15ನೇ ವರ್ಷದ ಲಕ್ಷದೀಪೋತ್ಸವ ಹಾಗೂ ಕೊಂಡದಮ್ಮ (ಈರಮಾಸ್ತಮ್ಮ) ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.   ದೇವಾಲಯಕ್ಕೆ ಆಗಮಿಸಿದ ಭಕ್ತವೃಂದದವರಿಗೆ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಟಿ ಮಂಜುನಾಥ್,ಎಸ್ ಮಲ್ಲಯ್ಯ, ಎಂ ಆರ್ ರಮೇಶ್ ಚಂದ್ರಶೇಖರ್, ಪದ್ಮಭಾಯಿ,ನಾಗೇಂದ್ರ ರಾವ್, ಸ್ವಾಮಿ, […]

Continue Reading

ಐಐಎಚ್‌ಆರ್ ಆವರಣದಲ್ಲಿ ಫೆ.27ರಿಂದ ಮಾರ್ಚ್ 1ರವರೆಗೆ ರಾಷ್ಟ್ರೀಯ ತೋಟಗಾರಿಕಾಮೇಳ

ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ(ಐಐಎಚ್‌ಆರ್) ಆವರಣದಲ್ಲಿ ಫೆ.27ರಿಂದ ಮಾರ್ಚ್ 1ರವರೆಗೆ ‘ರಾಷ್ಟ್ರೀಯ ತೋಟಗಾರಿಕಾ ಮೇಳ 2025’ ಆಯೋಜಿಸಲಾಗಿದೆ‌ ಎಂದು‌ ಐಐಎಚ್‌ಆರ್ ನಿರ್ದೇಶಕ ತುಷಾರ್ ಕಾಂತಿ ಬೆಹೆರಾ ಮಾಹಿತಿ ನೀಡಿದರು.   ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ (ICAR-IIHR) ಸಭಾಂಗಣದಲ್ಲಿ ನಡೆದ‌ ಮಾಧ್ಯಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಕಸಿತ ತೋಟಗಾರಿಕೆ ಭಾರತಕ್ಕಾಗಿ ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ’ ಶೀರ್ಷಿಕೆ ಅಡಿಯಲ್ಲಿ ಉತ್ತಮ ಪೌಷ್ಟಿಕಾಂಶಯುತ್ತ ಬೆಳೆ ಬೆಳೆಯುವ ತಂತ್ರಜ್ಞಾನ, ಹೊಸ ತಳಿಗಳು, ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ ಸೇರಿದಂತೆ ತೋಟಗಾರಿಕೆ […]

Continue Reading

ಭೂಕಬಳಿಕೆ ಆರೋಪ : ವ್ಯವಸಾಯ ಭೂಮಿ ಉಳಿಸುವಂತೆ ರೈತನ ಅಳಲು

ದೊಡ್ಡಬಳ್ಳಾಪುರ : ಹುಸ್ಕೂರು ಗ್ರಾಮದ ಸರ್ವೆ ನಂ.37 ರಲ್ಲಿ 0-13 ಗುಂಟೆ ಜಮೀನಿನ ಮೂಲ ದಾಖಲೆಗಳಿಲ್ಲದೆ ದಾಖಲೆಗಳನ್ನು ತಿರುಚಿ ಅಕ್ರಮವಾಗಿ ಕ್ರಯ ನೋಂದಣಿ ಮಾಡಿಕೊಂಡು ನಮ್ಮ ಜಮೀನು ಕಬಳಿಸಲು ಸಂಚು ರೂಪಿಸಿಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ.   ಈ ಕುರಿತು ಮಾತನಾಡಿರುವ ಅವರು ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಹುಸ್ಕೂರು ಗ್ರಾಮದ ಸರ್ವೆ ನಂ.37 ರಲ್ಲಿ 0-13 ಗುಂಟೆ ಜಮೀನನ್ನು ಅಕ್ರಮವಾಗಿ ಕ್ರಯನೋಂದಣಿ ಮಾಡಿಕೊಂಡಿದ್ದಾರೆ, ನನ್ನ ತಂದೆಯವರಾದ ಹನುಮಂತರಾಯಪ್ಪ ಅವರು ದಿನಾಂಕ:-18/04/1964 ರ ಕ್ರಯಪತ್ರ 180/64-65 ರ ಮೂಲಕ […]

Continue Reading

672ನೇ ಜಾಂಭವ ಯುವ ಸೇನೆಯ ನೂತನ ಘಟಕ ಉದ್ಘಾಟನೆ : ಹಾಲೇನಹಳ್ಳಿ ಶಾಖೆ ಅಧ್ಯಕ್ಷರಾಗಿ ಮಂಜುನಾಥ್ ನೇಮಕ

ದೊಡ್ಡಬಳ್ಳಾಪುರ : ಮೂಲಭೂತ ಸೌಕರ್ಯ ಕಲ್ಪಿಸುವ ವಿಚಾರವಾಗಿ ನಮ್ಮ ಯುವ ಸೇನೆ ಕಾನೂನಾತ್ಮಕವಾಗಿ ನಿರಂತರ ಹೋರಾಟ ನೆಡೆಸುವ ಮೂಲಕ ರಾಜ್ಯದ ದಲಿತಮೇಲೆ ನೆಡೆಯುತ್ತಿರುವ ದೌರ್ಜನ್ಯ,ದಬ್ಬಾಳಿಕೆ ಅಂತ್ಯ ಮಾಡುವ ಸಲುವಾಗಿ ಸಮುದಾಯದ ಶಕ್ತಿಯಾಗಿ ಶ್ರಮಿಸಲಿದೆ ಎಂದು ಜಾಂಭವ ಯುವ ಸೇನೆಯ ರಾಜ್ಯಾಧ್ಯಕ್ಷ ಡಾ. ಎಸ್.ಎಂ. ರಮೇಶ್ ಚಕ್ರವರ್ತಿ ತಿಳಿಸಿದರು. ತಾಲ್ಲೂಕಿನ ಮಧುರೆ ಹೋಬಳಿಯ ಹಾಲೇನಹಳ್ಳಿ ಗ್ರಾಮದಲ್ಲಿ ಜಾಂಭವ ಯುವ ಸೇನೆಯ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರೊಂದಿಗೆ ಜೊತೆಗೂಡಿ ಇಂದು ನಮ್ಮ […]

Continue Reading

ಶುಶೂಷಾಧಿಕಾರಿಗಳ ಅನಿರ್ಧಿಷ್ಟಾವಧಿ ಆಹೋರಾತ್ರಿ ಧರಣಿಗೆ ಒಟ್ಟಾಗಿ : ನಮ್ಮ ಹಕ್ಕು ಪಡೆಯಲು ಮುಂದಾಗಿ : ರಾಧಾ ಸುರೇಶ್

ಹಲವಾರು ಬಾರಿ ನಮ್ಮ ಕುಂದುಕೊರತೆಗಳು ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಈ ಬಾರಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೂ ನಮ್ಮೆಲ್ಲರ ( ಶುಶೂಷಾಧಿಕಾರಿಗಳ) ಅನಿರ್ಧಿಷ್ಟಾವಧಿ ಆಹೋರಾತ್ರಿ ಧರಣಿ ನೆಡೆಯಲಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಕ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪಿ. ಎನ್. ರಾಧಾ ಸುರೇಶ್ ತಿಳಿಸಿದ್ದಾರೆ.     ರಾಷ್ಟ್ರೀಯ ಆರೋಗ್ಯ ಅಭಿಯಾನ ಗುತ್ತಿಗೆ ಆಧಾರದ ಶುಶೂಷಾಧಿಕಾರಿಗಳು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮಟ್ಟದಲ್ಲಿ ಇದೆ ಫೆಬ್ರವರಿ 24 […]

Continue Reading

ಯಶಸ್ವಿಯಾಗಿ ನಡೆದ ರಾಸಾಯನಿಕ ಸೋರಿಕೆ ಅಣುಕು ಪ್ರದರ್ಶನ

ಬೆಂ.ಗ್ರಾ.ಜಿಲ್ಲೆ: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಎನ್.ಡಿ.ಆರ್.ಎಫ್ ವತಿಯಿಂದ ಹೊಸಕೋಟೆ ತಾಲೂಕಿನ ದೇವನಗುಂದಿ ಕೈಗಾರಿಕಾ ಪ್ರದೇಶದ ಐಒಸಿಎಲ್ ಎಲ್.ಪಿ.ಜಿ ಬಾಟ್ಲಿಂಗ್ ಪ್ಲಾಂಟ್ ನಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಗುರುವಾರ ಅಫ್ ಸೈಟ್ ತುರ್ತು ರಾಸಾಯಿನಿಕ ಸೋರಿಕೆ ಅಣುಕು ಪ್ರದರ್ಶನವನ್ನು ಯಶಸ್ವಿಯಾಗಿ ನಡೆಸಲಾಯಿತು. ಆಫ್-ಸೈಟ್ ತುರ್ತು ಅಣಕು ಪ್ರದರ್ಶನದಲ್ಲಿ ಸುಮಾರು 50 ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಎನ್.ಡಿ.ಆರ್.ಎಫ್ ಸಿಬ್ಬಂದಿ, ಅಗ್ನಿಶಾಮಕ ದಳ, 12 ಆಂಬ್ಯುಲೆನ್ಸ್ ವಾಹನಗಳು, ವೈದ್ಯರು ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು 100 ಪ್ರತಿನಿಧಿಗಳು […]

Continue Reading

ಜಿಲ್ಲಾಡಳಿತ ಭವನದಲ್ಲಿ ಶ್ರೀ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ

ಬೆಂ.ಗ್ರಾ.ಜಿಲ್ಲೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಶ್ರೀ ಸಂತ ಸೇವಾಲಾಲ್ ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞ ‘ ಜಯಂತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ನ್ಯಾಯಾಲಯ ಸಭಾಂಗಣದಲ್ಲಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಶ್ರೀ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು. […]

Continue Reading

ಅರ್ಕಾವತಿ ಹೋರಾಟಗಾರರ ಆರೋಪಕ್ಕೆ ಅಧಿಕಾರಿಗಳ ಸಮ್ಮುಖದಲ್ಲೇ ಉತ್ತರ ಕೊಟ್ಟ ಇಂಡಿಗೋ ಬ್ಲೂ ಕಂಪನಿ

ದೊಡ್ಡಬಳ್ಳಾಪುರ : ಇಂಡಿಗೋ ಬ್ಲೂ ಕಂಪನಿಯಿಂದ ಕಲುಷಿತ ನೀರು, ಚರಂಡಿಗೆ ಬಿಡುತ್ತಿದ್ದಾರೆಂದು ಆರೋಪಿಸಿ ಅರ್ಕಾವತಿ ಹೋರಾಟ ಸಮಿತಿಯ ಹೋರಾಟಗಾರರು ಬಹಳ ದಿನಗಳಿಂದಲೂ ಕಂಪನಿಯ ವಿರುದ್ಧ ಆರೋಪಿಸುತ್ತಿದ್ದೂ ಈ ವಿಚಾರದ ಸತ್ಯಾಸತ್ಯತೆ ತಿಳಿಯಲೆಂದು ಸ್ವತಃ ದೊಡ್ಡಬಳಾಪುರ ಕ್ಷೇತ್ರದ ತಹಶೀಲ್ದಾರ್, ಮಾಲಿನ್ಯ ನಿಯಂತ್ರ ಮಂಡಳಿ ಅಧಿಕಾರಿಗಳು, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ ಅಧಿಕಾರಿಗಳು, ಸ್ಥಳೀಯ ಕೆಲವು ಜನಪ್ರತಿನಿಧಿಗಳು, ಪೋಲಿಸ್ ಅಧಿಕಾರಿಗಳು ಸೇರಿದಂತೆ ಮಾಧ್ಯಮ ಪ್ರತಿನಿಧಿಗಳು ಸಹ ಇಂಡಿಗೋ ಬ್ಲೂ ಕಂಪನಿಯ ಬಳಿ ಜಮಾಯಿಸಿದ್ದರು.   ಇತ್ತೀಚಿನ ದಿನಗಳಲ್ಲಿ ದೊಡ್ಡ ತುಮಕೂರು ಕೆರೆ […]

Continue Reading

ಬೆಂಗಳೂರಿನ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಲಾವಿದೆ ಎಂ ಕೆ ನವ್ಯಶ್ರೀ ಅವರಿಗೆ ಅಪ್ರತಿಮ ಗುರು ಪುರಸ್ಕಾರ

ದೊಡ್ಡಬಳ್ಳಾಪುರ : ನಗರದ ಭರತನಾಟ್ಯ ಕಲಾವಿದೆ ಎಂ ಕೆ ನವ್ಯಶ್ರೀ ಇವರಿಗೆ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಪ್ರತಿಮ ಗುರು ಪುರಸ್ಕಾರ (ರಾಷ್ಟ್ರ ಪ್ರಶಸ್ತಿ) ನೀಡಿ ಗೌರವಿಸಲಾಯಿತು. ಇದೆ ಫೆಬ್ರವರಿ 15 ರಿಂದ 17 ವರೆಗೆ ರಾಜಸ್ಥಾನದ ಜೈಪುರ್ ನಲ್ಲಿ ಬೆಂಗಳೂರಿನ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಾಟ್ಯ ಮಿಲನ 2025 ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರದ ಭರತನಾಟ್ಯ ಕಲಾವಿದೆ […]

Continue Reading

ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ : ಶುಭ ಹಾರೈಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘ

ಬೆಂಗಳೂರು ಗ್ರಾಮಾಂತರ : ತಾಲ್ಲೂಕು ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ದೇವನಹಳ್ಳಿಯ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ: ಅಧ್ಯಕ್ಷರಾಗಿ ಹರೀಶ್ ಬೆಟ್ಟಹಳ್ಳಿ, ಉಪಾಧ್ಯಕ್ಷರಾಗಿ ನಾಗರಾಜ್, ರಾಜಣ್ಣ, ಕಾರ್ಯದರ್ಶಿಯಾಗಿ ಬೈರೇಗೌಡ, ಖಜಾಂಚಿಯಾಗಿ ಬಾಬು ,ಸಹ ಕಾರ್ಯದರ್ಶಿಯಾಗಿ ಮದನ್, ಸಂಘಟನಾ ಕಾರ್ಯದರ್ಶಿಯಾಗಿ ರವೀಶ್ ಆಯ್ಕೆ ಯಾಗಿದ್ದಾರೆ. ಜಿಲ್ಲಾ ಸಮಿತಿಗೆ ನೂತನವಾಗಿ ಆಯ್ಕೆಯಾದ ಪ್ರವಾಸ ಸಮಿತಿಯ ನೂತನ […]

Continue Reading