ನಿಧನ ವಾರ್ತೆ : ತೂಬಗೆರೆ ವೆಂಕಟೇಶಪ್ಪ ( ದೇವೇಗೌಡ್ರು) ಇನ್ನಿಲ್ಲ

Spread the love

ತೂಬಗೆರೆ : ಪ್ರಮುಖರು ಸದಾ ದೈವ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ತೂಬಗೆರೆಯ ವೆಂಕಟೇಶಪ್ಪ ( ದೇವಗೌಡ್ರು, ಬಳೆಸ್ವಾಮಿ ) ರವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ .

 

ಕಳೆದ ಶುಕ್ರವಾರ (ಜ. 10) ನಗರದ ಡಿ ಕ್ರಾಸ್ ಸಮೀಪ ಅಪಘಾತಕ್ಕಿಡಾಗಿದ್ದ ಅವರು ಕಳೆದ 7ದಿನಗಳಿಂದ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು , ಜ 16ರಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

 

ಅಪಘಾತ ಕುರಿತಂತೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ಹಂತದಲ್ಲಿದೆ , ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

© 2026 Malnad TV. All Rights Reserved.