ತಮ್ಮ ಮನೆಗಳ ಮೇಲೆ ಯಾರು ಕಪ್ಪು ಬಾವುಟ ಹಾರಿಸಬೇಡಿ – ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿ ಮುಖಂಡ ವಸಂತ್ ಕುಮಾರ್

Spread the love

ದೊಡ್ಡಬಳ್ಳಾಪುರ : ಈ ಹಿಂದೆ ದೊಡ್ಡ ತುಮಕೂರು ಕೆರೆ ಏರಿ ಸಮೀಪ ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮಸ್ಥರು ಪತ್ರಿಕಾಗೋಷ್ಠಿ ನಡೆಸಿ ಈ ಬಾರಿ ಆಗಸ್ಟ್ 15ರಂದು ಕಪ್ಪು ಬಾವುಟವನ್ನು ದೊಡ್ಡ ತುಮಕೂರು ಹಾಗೂ ಮಜರಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಮನೆಗಳ ಮೇಲೆ ಹಾರಿಸಲಾಗುವುದು ಎಂದು ತಿಳಿಸಿದ್ದರು.

 

ದೊಡ್ಡ ತುಮಕೂರು ಮತ್ತು ಮಜರಾ ಹೊಸಹಳ್ಳಿ ಗ್ರಾಮಸ್ಥರು ಹಾಗೂ ಅರ್ಕಾವತಿ ನದಿ ಪಾತ್ರ ಹೋರಾಟ ಸಮಿತಿಯು ಸದ್ಯಕ್ಕೆ ಕಪ್ಪು ಬಾವುಟ ಹಾರಿಸುವ ಕಾರ್ಯಕ್ರಮವನ್ನು ಹಿಂಪಡೆದಿದೆ.

 

ಹೌದು ಜಿಲ್ಲಾಧಿಕಾರಿಗಳ ಸಂಧಾನ ಭೇಟಿ ಯಶಸ್ವಿಯಾಗಿದ್ದು ಪ್ರತಿಭಟನಾಕಾರರು ಕಪ್ಪು ಬಾವುಟ ಹಾರಿಸುವ ನಿರ್ಣಯವನ್ನು ಹಿಂಪಡೆದುಕೊಂಡಿದ್ದಾರೆ . ಈ ಕುರಿತು ಹೋರಾಟ ಸಮಿತಿಯ ಮುಖಂಡ ವಸಂತ್ ಕುಮಾರ್ ಮಾತನಾಡಿ ಸದ್ಯಕ್ಕೆ ಹೋರಾಟವನ್ನು ಹಿಂಪಡೆದಿದ್ದೇವೆ ಇನ್ನು ನಾಲ್ಕು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ಕೊಟ್ಟಿದ್ದಾರೆ ಈ ಹಿನ್ನಲೆಯಲ್ಲಿ ಕಪ್ಪು ಬಾವುಟ ಹಾರಿಸುವ ಕಾರ್ಯಕ್ರಮವನ್ನು ಸದ್ಯಕ್ಕೆ ಕೈ ಬಿಟ್ಟಿದ್ದು ಯಾರು ಕಪ್ಪು ಬಾವುಟವನ್ನು ಹರಿಸಬಾರದು ಎಂದು ಮನವಿ ಮಾಡಿದ್ದಾರೆ.

 

 

Leave a Reply

Your email address will not be published. Required fields are marked *

© 2026 Malnad TV. All Rights Reserved.