ಡಾ. ಬಾಬು ಜಗಜೀವನ್ ರಾಂ ಭವನದದ ನವೀಕರಣ ಕಾಮಗಾರಿಗೆ ಚಾಲನೆ : ಭೂಮಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಧೀರಜ್ ಮುನಿರಾಜು

Spread the love

ನಗರದ ಡಾ. ಬಾಬು ಜಗಜೀವನ್ ರಾಂ ಭವನದದ ನವೀಕರಣ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಗುರುವಾರ ಭೂಮಿ ಪೂಜೆ ಮಾಡಿ ಚಾಲನೆ ನೀಡಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ಸರ್ಕಾರಿ ಕಟ್ಟಡಗಳಲ್ಲಿ ಅತಿ ವಿಶಾಲ ಹಾಗೂ ಬೃಹತ್ ಕಟ್ಟಡ ಹೊಂದಿರುವ ಡಾ.ಜಗಜೀವನ್ ರಾಂ ಭವನದಲ್ಲಿ ಹಲವು ಕುಂದು ಕೊರತೆಗಳ ಕಾರಣದಿಂದಾಗಿ ಸಾರ್ವಜನಿಕರ ಸದ್ಬಳಕೆ ಪ್ರಮಾಣ ಕಡಿಮೆಯಾಗಿದೆ, ಹೀಗಾಗಿ ಭವನದಲ್ಲಿನ ಸೌಂಡ್ ಸಿಸ್ಟಮ್, ಅಡಿಗೆ ಸಂಬಂಧಿತ ವಸ್ತುಗಳು, ಮೊಲ್ಡಿಂಗ್ ಸೇರಿದಂತೆ ಇತರ ನೂನ್ಯತೆಗಳನ್ನು ಸರಿಪಡಿಸಲಾಗುವುದು. ಕಾಮಗಾರಿಗಾಗಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 1.5 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಭವನದ ಅಭಿವೃದ್ಧಿ ಕಾರ್ಯಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚಿಸುವ ಮೂಲಕ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ಶೀಘ್ರ ಮುಕ್ತಯಗೊಳಿಸಲಾಗಿವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಶಿವು,ವೆಂಕಟೇಶ್, ವತ್ಸಲಾ, ಹಂಸಪ್ರಿಯ,ವಕೀಲರಾದ ಕಾಂತರಾಜು, ಜೆ ವೈ ಮಲ್ಲಣ್ಣ, ಸಮಾಜದ ಮುಖಂಡರಾದ ರಾಮಮೂರ್ತಿ( ರಾಮು ) ನೇರಳೆಘಟ್ಟ, ಟಿ ಡಿ ಮುನಿಯಪ್ಪ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.