ಬೆಂಗಳೂರು ಗ್ರಾಮಾಂತರ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 194ನೇ ಪುಣ್ಯಸ್ಮರಣೆ ಅಂಗವಾಗಿ ರಾಯಣ್ಣನವರ ಪುತ್ಥಳಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಕ್ಷಣಾ ವೇದಿಕೆ ಟಿ ಏ ನಾರಾಯಣಗೌಡರನ್ನು ಜೊತೆಗೂಡಿಸಿಕೊಂಡು ಮಾಲಾರ್ಪಣೆ ಮಾಡಿರುವುದು ಕನ್ನಡ ಪರ ಹೋರಾಟಗಾರರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದು ಕರವೇ ಘಟಕದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಸಂತಸ ವ್ಯಕ್ತಪಡಿಸಿದ್ದಾರೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 194ನೇ ಪುಣ್ಯಸ್ಮರಣೆ ಅಂಗವಾಗಿ ರಾಯಣ್ಣನವರ ಪುತ್ಥಳಿಗೆ ಮಾನ್ಯ ಮುಖ್ಯಮಂತ್ರಿಗಳು ಮಾಲರ್ಪಣೆ ಮಾಡಿದ್ದು ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡರನ್ನು ಅತ್ಯಂತ ಗೌರವಪೂರ್ವಕವಾಗಿ ನಡೆಸಿಕೊಂಡಿರುವುದು , ಸದಾ ಕನ್ನಡಪರ ಧ್ವನಿ ಎತ್ತುವ ಲಕ್ಷಾಂತರ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ , ಕನ್ನಡ ಭಾಷೆ ನೆಲ ಜಲ ವಿಚಾರವಾಗಿ ಹಲವು ವರ್ಷಗಳ ಸುದೀರ್ಘ ಹೋರಾಟ ನಡೆಸಿರುವ ಟಿ ಏ ನಾರಾಯಣಗೌಡರನ್ನು ರಾಜ್ಯದ ಮುಖ್ಯಮಂತ್ರಿಗಳು ಅತ್ಯಂತ ಆತ್ಮೀಯತೆ ನಡೆಸಿಕೊಂಡಿರುವುದು ಶ್ಲಾಘನೀಯ ವಿಷಯವಾಗಿದೆ, ಈ ವಿಚಾರಕ್ಕೆ ಕರವೇ ಕುಟುಂಬ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇವೆ ಎಂದರು.

ಕೇಂದ್ರವೂ ಕೂಡ ರಾಜ್ಯ ಸರ್ಕಾರಗಳಂತೆ ನಾಡು ನುಡಿ ಭಾಷೆಗಾಗಿ ಸದಾ ಹೊರಟ ನಡೆಸುವ ಹೋರಾಟಗಾರರನ್ನು ಪರಿಗಣಿಸಿ ಗೌರವಯುತವಾಗಿ ವೇದಿಕೆಗಳಲ್ಲಿ ನಡೆಸಿಕೊಳ್ಳುವ ಆಚರಣೆಗೆ ಮುಂದಾಗಬೇಕಿದೆ, ಆಗ ಸ್ಥಳೀಯ ಭಾಷೆಯ ವಿಶೇಷತೆ, ಶಕ್ತಿ ದೇಶಾದ್ಯಂತ ಅರಿಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ.
