ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ನೂತನ ಸಾರಥಿಯಾಗಿ ಎ ನಾರಾಯಣಸ್ವಾಮಿ ಆಯ್ಕೆ : ನೂತನ ಅಧ್ಯಕ್ಷರಿಗೆ ಪ್ರಚಾರ ಸಮಿತಿ ವತಿಯಿಂದ ಅಭಿನಂದನೆ

ಬೆಂಗಳೂರು: ಕನಾ೯ಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಕನಾ೯ಟಕ ಸಕಾ೯ರ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಸನ್ಮಾನ್ಯ ಶ್ರೀ ಎ.ನಾರಾಯಣಸ್ವಾಮಿರವರಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು   ಪ್ರಚಾರ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ರಾಜ್ಯಾಧ್ಯಕ್ಷರಾದ ಮುನಿಕೃಷ್ಣಪ್ಪ ( ಪಾಲ್) ರವರು ನೂತನ ಅಧ್ಯಕ್ಷರನ್ನು ಭೇಟಿಮಾಡಿ ಹಲವು ವಿಷಯಗಳನ್ನು ಕುರಿತು ಸಂವಾದ ನಡೆಸಿದರು .ಈ ಸಂದರ್ಭದಲ್ಲಿ ಪ್ರಚಾರ ಸಮಿತಿಯ ವತಿಯಿಂದ ನೂತನ ಅಧ್ಯಕ್ಷರನ್ನು ಸನ್ಮಾನಿಸಲಾಯಿತು   ಈ ಕುರಿತು ಕರ್ನಾಟಕ ರಾಜ್ಯ […]

Continue Reading

ಬಿಗ್ ಬಾಸ್ ಸ್ಪರ್ಧಿ ಪ್ರತಾಪ್ ವಿರುದ್ಧ ಕೇಸ್ ದಾಖಲಿಸಲು ಮುಂದಾದ ನೋಡಲ್ ಅಧಿಕಾರಿ ಡಾ. ಪ್ರಯಾಗ್

ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಮನೆಯಲ್ಲಿ ನಡೆದ ಟಾಸ್ಕ್ ಒಂದರಲ್ಲಿ ತಾವು ಕೋರೋನ ಕ್ವಾರಂಟೈನ್ ಅನುಭವ ತಿಳಿಸುವ ಸಂದರ್ಭದಲ್ಲಿ ಕೆಲವು ಪ್ರಮುಖ ಅಂಶಗಳನ್ನು ತನ್ನ ಸಹ ಸ್ಪರ್ಧಿಗಳ ಮುಂದೆ ಮಾತನಾಡುತ್ತಾ ತನ್ನನ್ನು ಬುದ್ಧಿಮಾಂದ್ಯ ಎಂದು ಒಪ್ಪಿಕೊಳ್ಳುವಂತೆ ಸಹಿ ಹಾಕಲು ಹಾಗೂ ತಪ್ಪುಗಳನ್ನು ಒಪ್ಪಿಕೊಳ್ಳುವಂತೆ ಬಲವಂತವಾಗಿ ಓಡೆಯಲಾಗಿತ್ತು ಹಾಗೂ ಹಿಂಸಿಸಲಾಗಿತು ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದರು ಈ ಕುರಿತಂತೆ ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲನ್ನು ಏರುವ ಪರಿಸ್ಥಿತಿ ಎದುರಾಗಿದೆ   ಹೌದು ಡ್ರೋನ್ ಪ್ರತಾಪ್ ರವರು ಕ್ವಾರಂಟೈನ್ […]

Continue Reading

ವಿಷ ಆಹಾರ ಸೇವಿಸಿ ದನ ಕರು ಸಾವು : ಮುಗಿಲು ಮುಟ್ಟಿದ ರೈತನ ಆಕ್ರಂದನ

ದೊಡ್ಡಬಳ್ಳಾಪುರ : ವಿಷಪೂರಿತ ಆಹಾರ ಸೇವಿಸಿ 3 ದನಗಳು ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಡತಿಪ್ಪುರು ಗ್ರಾಮದಲ್ಲಿ ನಡೆದಿದೆ   ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದ ಬಡರೈತ ರಂಗಪ್ಪ 6 ದನಗಳನ್ನು ಸಾಕಿದ್ದು ಇಂದು ಮುಂಜಾನೆ ಪ್ರತಿದಿನದಂತೆ ಈ ದಿನವೂ ಆಹಾರ ನೀಡಿದ್ದು ಇದಕ್ಕಿದ್ದಂತೆ ಸ್ವಾಧೀನ ಕಳೆದುಕೊಂಡು ಮೂರು ಹಸುಗಳು ಕುಸಿದು ಬಿದ್ದಿದೆ. ಗಾಬರಿಗೊಂಡ ರೈತ ವೈದ್ಯಕೀಯ ಸಹಾಯಕ್ಕೆ ಮುಂದಾಗಿದ್ದು ವೈದ್ಯರು ಬರುವ ಸಮಯಕ್ಕೆ ಒಂದು ದನ ಮರಣ ಹೊಂದಿದ್ದು ವೈದ್ಯರ ಚಿಕಿತ್ಸೆ […]

Continue Reading

ಸಂವಿಧಾನಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ 67ನೇ ಪರಿ ನಿಬ್ಬಾಣ ದಿನ: ಮೌಡ್ಯ ವಿರೋಧಿ ದಿನವಾಗಿ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆಯಿಂದ ಆಚರಣೆ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ರೋಜಿಪುರದ ಸ್ಮಶಾನದಲ್ಲಿ ಬಾಡೂಟ ಸವಿಯಲಾಯಿತು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 67ನೇ ಪರಿ ನಿಬ್ಬಾಣ ದಿನವನ್ನು ಮೌಡ್ಯ ವಿರೋಧಿ ದಿನವನ್ನಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ಆಚರಿಸಲಾಯಿತು   ಈ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕರು, ಸಾಹಿತಿಗಳು, ದಲಿತ ಮುಖಂಡರು,ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಗುಳ್ಯ ಹನುಮಣ್ಣ ಮಾತನಾಡಿ ನಿರೀಕ್ಷೆಗೂ ಮೀರಿದ […]

Continue Reading

ತಾಲ್ಲೂಕಿನ ವಕೀಲರ ಸಂಘದ ನೂತನ ನಿರ್ದೇಶಕರಿಗೆ ಛಲವಾದಿ ಮಹಾಸಭಾ ವತಿಯಿಂದ ಅಭಿನಂದನೆ : ಸಮುದಾಯದ ಏಳಿಗೆಗೆ ಶ್ರಮಿಸಲು ಮನವಿ

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕು ವಕೀಲರ ಸಂಘದಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಛಲವಾದಿ ಸಮುದಾಯದ ಶ್ರೀಮತಿ ಎನ್, ಲೀಲಾವತಿ ಮತ್ತು ಶ್ರೀ ಟಿ, ಜೆ, ಶಿವಕುಮಾರ್ ರವರುಗಳಿಗೆ ಛಲವಾದಿ ಮಹಾಸಭಾ ದ ಪದಾಧಿಕಾರಿಗಳು ಅಭಿನಂದನೆಗಳನ್ನು ಸಲ್ಲಿಸಲಾಯಿತು   ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷರಾದ ಸಿ ಗುರುರಾಜಪ್ಪ ಮಾತನಾಡಿ ನಮ್ಮ ಸಮುದಾಯದ ಏನ್.ಲೀಲಾವತಿ ಹಾಗೂ ಟಿ . ಜೆ.ಶಿವಕುಮಾರ್ ರವರು ದೊಡ್ಡಬಳ್ಳಾಪುರ ತಾಲ್ಲೂಕಿನ ವಕೀಲರ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ […]

Continue Reading

ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುವುದು ಅತ್ಯಂತ ಅಗತ್ಯವಾಗಿದೆ – ಸಿ ಗುರುರಾಜಪ್ಪ

ದೊಡ್ಡಬಳ್ಳಾಪುರ : ಮಹಾಮಾನವತಾವಾದಿ, ವಿಶ್ವಾಜ್ಞಾನಿ, ಡಾ :ಬಾಬಾ ಸಾಹೇಬರ 67ನೇ ಪರಿನಿರ್ವಾಣದ ಅಂಗವಾಗಿ ತಾಲ್ಲೂಕಿನ ನಗರ ಭಾಗದ ಹಳೇ ಬಸ್ ನಿಲ್ದಾಣದಲ್ಲಿರುವ ಬಾಬಾ ಸಾಹೇಬರ ಪುತ್ತಿಳಿಗೆ ಛಲವಾದಿ ಮಹಾಸಭಾ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.   ನಂತರ, ಸಂವಿಧಾನ ಪೀಠಿಕೆಯನ್ನು ಭೋದಿಸಿ, ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುವುದು ಅತ್ಯಂತ ಅಗತ್ಯವಾಗಿದೆ ಜಾತಿ -ಜಾತಿಗಳ ನಡುವೆ ಸಂಘರ್ಷಗಳು ಹೆಚ್ಚಾಗಿರುವ ಸಂಧಿಗ್ದ ಪರಿಸ್ಥಿತಿಯಲ್ಲಿ ಜಾತಿಗಳ ಉಳಿಯುವಿಕೆಯು ಅತ್ಯಂತ ಜರೂರಾಗಿದೆ ಎಂದು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಸಿ, ಗುರುರಾಜಪ್ಪ ಅವರು ಪ್ರತಿಪಾದಿಸಿದರು.   […]

Continue Reading

ಬಾಬಾಸಾಹೇಬರ ಸಂಧ್ಯಾರಾಗ; ಕೊನೆಯ ರಾತ್ರಿಯ ಕಾಯಕ

1956 ರ ಒಂದು ಸಂಜೆ ಬಾಬಾಸಾಹೇಬರ ದುಗುಡ ತುಂಬಿದ ಮಾತುಗಳನ್ನು ಕೇಳುತ್ತಿದ್ದ ನಾನಕ್ ಚಂದ್ ರತ್ತುವಿಗೆ ಅವರ ಕೊನೆಯ ದಿನಗಳು ಹತ್ತಿರವಿದ್ದಂತೆ ಕಂಡಿತು. ಈಚೆಗೆ ಅಂಬೇಡ್ಕರ್ ಸದಾ ದುಃಖದಲ್ಲಿ ಮುಳುಗಿರುತ್ತಿದ್ದನ್ನು ಕಂಡಿದ್ದ ರತ್ತು ಜುಲೈ ೩೧ರ ಸಂಜೆ ಕೇಳಿಯೇಬಿಟ್ಟರು: ‘ಸರ್, ಈಚೆಗೆ ತಾವು ಯಾಕೆ ಇಷ್ಟೊಂದು ದುಃಖಿಯಾಗಿರುತ್ತೀರಿ? ಆಗಾಗ ಅಳುತ್ತಿರುತ್ತೀರಿ. ದಯವಿಟ್ಟು ನಿಮ್ಮ ದುಃಖಕ್ಕೆ ಕಾರಣವೇನು, ಹೇಳಿ.’   ಚಣ ಸುಮ್ಮನಾದ ಬಾಬಾಸಾಹೇಬರ ಗದ್ಗದ ಕಂಠದಿಂದ ಹೊರಬಿದ್ದ ಮಾತುಗಳಿವು: ‘ನಾನು ಯಾಕಿಷ್ಟು ದುಃಖಿಯಾಗಿದ್ದೇನೆ, ನನ್ನನ್ನು ಯಾವ ಚಿಂತೆ […]

Continue Reading

ಮೌಢ್ಯ ವಿರೋಧಿ ದಿನದ ಕಾರ್ಯಕ್ರಮ : ಅಂಬೇಡ್ಕರ್ ರವರ 67ನೇ ಪರಿನಿಬ್ಬಾಣ ದಿನದ ವಿಶೇಷ ಆಚರಣೆ

ದೊಡ್ಡಬಳ್ಳಾಪುರ :ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ 67 ನೇ ಪರಿನಿಬ್ಬಾಣ ದಿನದ ಅಂಗವಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ವತಿಯಿಂದ ಡಿಸೆಂಬರ್ 6ರಂದು ಮೌಢ್ಯ ವಿರೋಧಿ ದಿನದ ಕಾರ್ಯಕ್ರಮವನ್ನು ತಾಲ್ಲೂಕಿನ ನಗರ ಭಾಗದ ರೋಜಿಪುರ ಸ್ಮಶಾನದಲ್ಲಿ ಬೆಳ್ಳಿಗೆ 11: 00 ಗಂಟೆಗೆ ಹಮ್ಮಿಕೊಳ್ಳಲಾಗಿದೆ   ಈ ಕುರಿತು ಕಾರ್ಯಕ್ರಮದ ಆಯೋಜಕರಾದ ರಾಜು ಸಣ್ಣಕ್ಕಿ ಮಾತನಾಡಿ ಮೌಢ್ಯಗಳ ವಿರುದ್ಧ ಸಮರ ಸಾರಿದ್ದ ಡಾ ಅಂಬೇಡ್ಕರ್ ರವರ ಮಹಾ ಪರಿನಿಬ್ಬಾಣ ದಿನದಂದು ಸಮಾಜದ […]

Continue Reading

ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮ : ಬರಡು ರಾಸುಗಳ ತಪಾಸಣೆ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರ

ದೊಡ್ಡಬಳ್ಳಾಪುರ : ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡರಾಯಪ್ಪನ ಹಳ್ಳಿ ಗ್ರಾಮದಲ್ಲಿ ಅಂತಿಮ ವರ್ಷದ ಬಿ ಎಸ್ಸಿ (ಅನರ್ಸ್ )ಕೃಷಿ ಮತ್ತು ಬಿ ಎಸ್ಸಿ (ಅನರ್ಸ್ )ಕೃಷಿ ವ್ಯವಹಾರ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು ಕಾರ್ಯಕ್ರಮದಲ್ಲಿ ವಿಶೇಷವಾಗಿ ಬರಡು ರಾಸುಗಳ ತಪಾಸಣೆ ಹಾಗೂ ಅರೋಗ್ಯ ಚಿಕಿತ್ಸೆ ಶಿಬಿರದ ಜೊತೆಗೆ ಜಂತು ನಿವಾರಣೆ, ಗರ್ಭಪರೀಕ್ಷೆ, ಲಸಿಕೆಗಳ ಮಾಹಿತಿ ನೀಡಲಾಯಿತು ತಪಾಸಣಾ ಶಿಬಿರಕ್ಕೆ ಹಲವಾರು ಡಾ […]

Continue Reading

ರಸ್ತೆ ಪಕ್ಕದ ಚರಂಡಿಯಲ್ಲಿ ಮಗುವಿನ ಶವ ಪತ್ತೆ: ಭಾಶೆಟ್ಟಿ ಹಳ್ಳಿ ಸಮೀಪ ಘಟನೆ

ದೊಡ್ಡಬಳ್ಳಾಪುರ : ( ಡಿ.04) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ದೊಡ್ಡ ಚರಂಡಿಯಲ್ಲಿ ಮಲಗಿರುವ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ಪುಟಾಣಿ ಮಗು ಮಲಗಿರುವ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಭಾಷೆಟ್ಟಿಹಳ್ಳಿ ಸಮೀಪ ಸಂಭಾವಿಸಿದ್ದು ಮೃತ ದೇಹವನ್ನು ಪೊಲೀಸ್ ವಶಕ್ಕೆ ಪಡೆದಿದ್ದು ಶವಾಗಾರಕ್ಕೆ ರವಾನಿಸಿದೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸತ್ಯಾಸತ್ಯತೆ ತನಿಖೆಯ ನಂತರ ಹೊರಬೀಳಲಿದೆ ಮೊದಲೇ ಸಾವನ್ನಪ್ಪಿರುವ ಮಗುವನ್ನು ತಂದು ಸ್ಥಳದಲ್ಲಿ ಬಿಟ್ಟಿರುವ ಸಂಶಯವಿದೆ […]

Continue Reading