ಮಹಿಳಾ ಸಮಾಜದಲ್ಲಿ ಮಹಿಳೆಯರಿಗೆ ಅಜೀವ ಸದಸ್ಯತ್ವ ಪಡೆಯಲು ಅವಕಾಶ ಕೋರಿ ಮನವಿ

ದೊಡ್ಡಬಳ್ಳಾಪುರ : ತಾಲ್ಲೂಕಿನ ಮಹಿಳಾ ಸಮಾಜ ಕಸ್ತೂರ ಬಾ ಶಿಶುವಿಹಾರ (ರಿ) ದಲ್ಲಿ ನೆಡೆಯುವ ಕಾರ್ಯಕಾರಿ ಸಮಿತಿಯ ಚುನಾವಣೆಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎಲ್ಲಾ ವರ್ಗದ ಮಹಿಳೆಯರು ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸುವಂತೆ ಅವಕಾಶ ಮಾಡಿಕೊಡಬೇಕೆಂದು ಮಾಜಿ ನಿರ್ದೇಶಕರಾದ ಪ್ರಮೀಳಾ ಮಹಾದೇವ್ ರವರು ಮಹಿಳಾ ಸಮಾಜದ ಅಧ್ಯಕ್ಷರಾದ ­ಎಂ ಕೆ ವತ್ಸಲಾ ರವರಿಗೆ ಮನವಿ ಸಲ್ಲಿಸಿದ್ದಾರೆ ‎   ಈ ಸಂದರ್ಭದಲ್ಲಿ ಕನ್ನಡ […]

Continue Reading

ಹಿರಿಯ ನಟಿ ಡಾ ಲೀಲಾವತಿ ಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ : ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಮೌನಾಚರಣೆ

ದೊಡ್ಡಬಳ್ಳಾಪುರ : ಕನ್ನಡಪರ ಸಂಘಟನೆಗಳ ಒಕ್ಕೂಟ ,ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಜಾಗೃತಿ ವೇದಿಕೆಯ ಸಹಯೋಗದೊಂದಿಗೆ ಹಿರಿಯ ನಟಿ ಡಾ. ಲೀಲಾವತಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೊಂಬತಿ ಹಿಡಿದು ಸಂತಾಪ ಸೂಚಿಸಿದರು   ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರು ಮೌನಾಚರಣೆ ಮಾಡುವ ಮೂಲಕ ಹಿರಿಯ ನಟಿ ಲೀಲಾವತಿಯವರಿಗೆ ಗೌರವ ಸಮರ್ಪಣೆ ಮಾಡಿದರು ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷರಾದ ಎ.ನಂಜಪ್ಪ ಮಾತನಾಡಿ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ರವರ […]

Continue Reading

ಓಂ ಶಕ್ತಿ ಮಲಾದಾರಿಗಳಿಗೆ ಉಚಿತ ಬಸ್ ವ್ಯವಸ್ಥೆ : ಡಿಸೆಂಬರ್ 11 ರಿಂದ ಉಚಿತ ಬಸ್ ನೋಂದಣಿ ಪ್ರಾರಂಭ

ದೊಡ್ಡಬಳ್ಳಾಪುರ : 2023- 2024 ನೇ ಸಾಲಿನ ಮೇಲ್ ಮರವತ್ತೂರ್ ಓಂ ಶಕ್ತಿಯಾತ್ರಾ ಪ್ರಯಾಣಕ್ಕೆ ದೊಡ್ಡಬಳ್ಳಾಪುರ ಮಾಲಾದಾರಿಗಳಿಗೆ ಉಚಿತ ಬಸ್ ನೋಂದಣಿ ಅಭಿಯಾನವನ್ನು ತಾಲ್ಲೂಕಿನ ಶಾಸಕರಾದ ಧೀರಜ್ ಮುನಿರಾಜು ರವರ ನೇತೃತ್ವದಲ್ಲಿ ಮಾಡಲಾಗುತ್ತಿದ್ದು ಉಚಿತ ಬಸ್ ನೋಂದಣಿ ಇದೇ ತಿಂಗಳ 11ನೇ ತಾರೀಕಿನಿಂದ ಪ್ರಾರಂಭವಾಗಲಿದೆ ಉಚಿತ ಬಸ್ ನೋಂದಣಿ ಬಯಸುವ ಮಾಲಾದಾರಿಗಳು 9916195222/9916295222 ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ಅಥವಾ ಅಂಜನಾದ್ರಿ,ಅರ್ಕಾವತಿ ಬಡಾವಣೆ , ಡಿ ಕ್ರಾಸ್ ರಸ್ತೆ , ದೊಡ್ಡಬಳ್ಳಾಪುರ ಇಲ್ಲಿ ಸಂಪರ್ಕಿಸುವ ಮೂಲಕ ನೋಂದಣಿ […]

Continue Reading

ನಟಿ ಲೀಲಾವತಿ ಭಾವಚಿತ್ರಕ್ಕೆ ಪುಷ್ಪ ನಮನ : ಭಾವುಕರಾದ ಅಭಿಮಾನಿ ಗಣ

ದೊಡ್ಡಬಳ್ಳಾಪುರ : ಹಿರಿಯ ನಟಿ ಲೀಲಾವತಿ ಅವರ ಅಗಲಿಕೆ ಪುಷ್ಪನಮನ ಸಲ್ಲಿಸಿ ಕಂಬನಿ ಮಿಡಿದ ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣ)   ದೊಡ್ಡಬಳ್ಳಾಪುರ ತಾಲೂಕು ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣದ )ವತಿಯಿಂದ ನಗರದ ಡಿ ಕ್ರಾಸ್ ಬಳಿಯಿರುವ ಡಾ.ರಾಜಕುಮಾರ್ ವೃತ್ತದಲ್ಲಿ ಶುಕ್ರವಾರ ವಿಧಿವಶರಾದ ಡಾ.ಲೀಲಾವತಿ ರವರಿಗೆ ಪುಷ್ಪನಮನ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.   ಲೀಲಾವತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಕರವೇ (ಪ್ರವೀಣ್ ಕುಮಾರ್ ಶೆಟ್ಟಿ ಬಣದ) ರಾಜ್ಯ ಪ್ರಧಾನ ಕಾರ್ಯದರ್ಶಿ […]

Continue Reading

68 ನೇ ಕನ್ನಡ ರಾಜ್ಯೋತ್ಸವ ಆಚರಣೆ: ಶ್ರೀ ವರಸಿದ್ದಿ ವಿನಾಯಕ ಆನೆ ಬಳಗದ 35 ನೇ ವಾರ್ಷಿಕೋತ್ಸವಕ್ಕೆ ಭರ್ಜರಿ ಸಿದ್ಧತೆ

ದೊಡ್ಡಬಳ್ಳಾಪುರ : ಶ್ರೀ ವರಸಿದ್ಧಿ ವಿನಾಯಕ ಆನೆ ಬಳಗದ ವತಿಯಿಂದ ತಾಲ್ಲೂಕಿನ ತ್ಯಾಗರಾಜನಗರದ ಆನೆ ಮೈದಾನದಲ್ಲಿ ಡಿಸೆಂಬರ್ 11ರಂದು ಸೋಮವಾರ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ   ಕನ್ನಡ ರಾಜ್ಯೋತ್ಸವದ ಆಚರಣೆಯ ಜೊತೆಗೆ ಸಂಜೆ 6 : 30 ಕ್ಕೆ ಲಕ್ಷದೀಪೋತ್ಸವ ಹಾಗೂ ಕಡಲೆಕಾಯಿ ಪರಿಷೆ ಯನ್ನು ಏರ್ಪಡಿಸಲಾಗಿದೆ ತಾಲ್ಲೂಕಿನ ಜನತೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರೀ ವರಸಿದ್ದಿ ವಿನಾಯಕ ಆನೆ ಬಳಗ ಮನವಿ ಮಾಡಿದೆ

Continue Reading

ಹಿರಿಯ ನಟಿ ಲೀಲಾವತಿ ವಿಧಿವಶ : ಕಣ್ಣೀರಲ್ಲಿ ಕರುನಾಡು

ಕನ್ನಡ ಚಿತ್ರರಂಗದ ಹಿರಿಯ ನಟಿ‌ ಲೀಲಾವತಿ ಅವರು ನಿಧನರಾಗಿದ್ದಾರೆ. ಅನಾರೋಗ್ಯದ ಸೋಲದೇವನಹಳ್ಳಿಯಲ್ಲಿನ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಲೀಲಾವತಿಯವರ ಆರೋಗ್ಯದಲ್ಲಿ ಕಳೆದ ಎರಡು ದಿನಗಳಿಂದ ಚೇತರಿಕೆ ಕಂಡಿತ್ತು.   ಡಿ 08 ರಂದು ಮಧ್ಯಾಹ್ನ ಲೋ ಬಿಪಿ ಸಮಸ್ಯೆ ಶುರುವಾಗಿದ್ದು ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ   ಕನ್ನಡದಲ್ಲಿ ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಸೇರಿದಂತೆ ಹಲವು ಸೂಪರ್​ ಹಿಟ್​ ಸಿನಿಮಾ ಮೂಲಕ ಅಭಿಮಾನಿಗಳನ್ನು […]

Continue Reading

ಅಭಿಮಾನಿಗಳಿಂದ ಯಶ್ 19 ಟೈಟಲ್ ಲಾಂಚ್ ಸಂಭ್ರಮ : ನಗರ ದೇವತೆ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ

ದೊಡ್ಡಬಳ್ಳಾಪುರ : ನಗರ ಭಾಗದ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ತಮ್ಮ ನೆಚ್ಚಿನ ನಟನ ನೂತನ ಚಿತ್ರದ ಟೈಟಲ್ ಲಾಂಚ್ ಟೀಸರ್ ಅನ್ನು ಸಂಭ್ರಮಿಸಲಾಗಿದೆ . ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಯುವ ಅಭಿಮಾನಿಗಳ ಸಂಘ ದೊಡ್ಡಬಳ್ಳಾಪುರದ ವತಿಯಿಂದ ತಮ್ಮ ನೆಚ್ಚಿನ ನಟ ಯಶ್ ರವರ ನೂತನ ಸಿನಿಮಾ ಟೈಟಲ್ ಲಾಂಚ್ ಪ್ರಯುಕ್ತ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು . ಯಶ್ 19 ನೇ ಸಿನಿಮಾ ‘ಟಾಕ್ಸಿಕ್’ ಎಂದು […]

Continue Reading

ನಿರ್ಮಾಪಕರಾಗಿ ನಟ ಯಶ್ ಚಿತ್ರರಂಗಕ್ಕೆ ಪಾದಾರ್ಪಣೆ : ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಚಿತ್ರ ನಿರ್ಮಾಣಕ್ಕೆ ಮುಂದಾದ ಯಶ್

ನಟ ರಾಕಿಂಗ್ ಸ್ಟಾರ್ ಯಶ್ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ ಹೌದು ಸತತ 20 ತಿಂಗಳುಗಳಿಂದ ತಮ್ಮ ನೂತನ ಸಿನಿಮಾ ಕುರಿತು ಯಾವುದೇ ಅಪ್ಡೇಟ್ ನೀಡದ ಯಶ್ ಇಂದು ಮುಂಜಾನೆ ಸಿನಿ ಚಿತ್ರ ರಸಿಕರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ ಕೆ ವಿ ಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ತಮ್ಮ ನೂತನ ಸಿನಿಮಾ ಟಾಕ್ಸಿಕ್ ( TOXIC) ನಲ್ಲಿ ಕೇವಲ ನಟರಾಗಿ ಉಳಿಯದೆ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ನಿರ್ಮಾಣಕ್ಕೂ ಕೈಹಾಕಿದ್ದಾರೆ   ಯಶ್ ಅಭಿಮಾನಿಗಳಿಗೆ ಹೊಸ […]

Continue Reading

ಯಶ್ 19 ಸಿನಿಮಾ ಟಾಕ್ಸಿಕ್ (TOXIC) : ಅಧಿಕೃತವಾಗಿ ಸಿನಿಮಾ ಟೈಟಲ್ ಘೋಷಣೆ ಮಾಡಿದ ಯಶ್

ಕಳೆದ 1ವರ್ಷ 8 ತಿಂಗಳಿಂದ ಯಾವುದೇ ಸಿನಿಮಾದ ಅಪ್ಡೇಟ್ ನೀಡದ ಯಶ್ ಟೀಮ್ ಇಂದು ಸೀಕ್ರೇಟ್ ಅನ್ನು ರಿವಿಲ್ ಮಾಡಿದೆ ಯಶ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ ತಮ್ಮ 19 ನೇ ಸಿನಿಮಾ ಟಾಕ್ಸಿಕ್ ಎಂದು ಅಧಿಕೃತ ಘೋಷಣೆ ಮಾಡಿದ ಯಶ್   ಯಶ್ ರವರ 19 ನೇ ಸಿನಿಮಾ ಟಾಕ್ಸಿಕ್ ಗೆ ಫಿದಾ ಆದ ಅಭಿಮಾನಿ ಬಳಗ ವಿಶೇಷ ಲುಕ್ ನಲ್ಲಿ ಕಾಣಿಸಿಕೊಂಡಿರುವ ಯಶ್ ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಹೆಚ್ಚು ಮಾಡಿದ್ದಾರೆ   ರಾಜ್ಯಾದ್ಯಂತ […]

Continue Reading

ಬೀಳುವ ಅತಂತ್ರ ಸ್ಥಿತಿಯಲ್ಲಿ ಜಾಹಿರಾತು ಸೂಚನಾ ಫಲಕ : ಗಮನಹರಿಸದ ತೂಬಗೆರೆ ಪಂಚಾಯಿತಿ ಅಧಿಕಾರಿಗಳು

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದ ಬಸ್ ನಿಲ್ದಾಣದಲ್ಲಿ ಕಳೆದ ಹಲವು ದಿನಗಳಿಂದ ಬೀಳುವ ಸ್ಥಿತಿಯಲ್ಲಿ ಜಾಹೀರಾತು ಸೂಚನಾ ಫಲಕವಿದ್ದು ತೆರವುಗೊಳಿಸುವಲ್ಲಿ ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ಸೋತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ತೂಬಗೆರೆ ಪಂಚಾಯಿತಿ ಕಾರ್ಯಾಲಯಕ್ಕೆ ಕೇವಲ 100 ಮೀಟರ್ ಕೂಗಳತೆ ದೂರದಲ್ಲಿ ಇರುವ ಜಾಹೀರಾತು ಸೂಚನಾ ಫಲಕ ಇಂದೋ ನಾಳೆಯೋ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು ಭಯದ ವಾತಾವರಣದಲ್ಲಿ ಪಾದಚಾರಿಗಳು ಹೊಡಾಡುವ ಪರಿಸ್ಥಿತಿ ಎದುರಾಗಿದೆ ಇನ್ನಾದರೂ ಪಂಚಾಯಿತಿ ಅಧಿಕಾರಿಗಳು ಎಚ್ಚೆದ್ದು ಸದರಿ ಜಾಹೀರಾತು ಸೂಚನಾ ಫಲಕವನ್ನು […]

Continue Reading